ಯಮ ಬಂದು ಕರೆದ್ರೂ ಅಮ್ಮ ಹೇಳಿದ ಕೆಲಸ ಮಾಡಿಯೇ ಮಾಡ್ತೇನೆ: ದರ್ಶನ್‌ ಭಾವುಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಂಬರೀಷ್‌ ಕುಟುಂಬದ ಜೊತೆ ಒಂದೊಳ್ಳೆ ಬಾಂಧವ್ಯ ಬೆಳೆಸಿಕೊಂಡಿರುವ ದರ್ಶನ್‌, ಸುಮಲತಾರನ್ನು ಅಮ್ಮ ಎಂದು ಪ್ರೀತಿಯಿಂದ ಕರೆಯುತ್ತಾರೆ.

ಈಂದು ಮಂಡ್ಯದಲ್ಲಿ ಸುಮಲತಾ ತಮ್ಮ ರಾಜಕೀಯ ನಿಲುವು ಹೇಳಲು ಸಭೆ ಮಾಡಿದ್ದರು, ಸಭೆಗಾಗಿ ದರ್ಶನ್‌ ಆಗಮಿಸಿದ್ದರು. ದರ್ಶನ್‌ ಕೈಗೆ ಕಾಸ್ಟಿಂಗ್‌ ಹಾಕಿರುವುದನ್ನು ನೋಡಿ ಅಭಿಮಾನಿಗಳು ಗಾಬರಿ ಆಗಿದ್ದರು.

ಸುಮಲತಾ ಪರ ಪ್ರಚಾರಕ್ಕಾಗಿ ದರ್ಶನ್‌ ತಮ್ಮ ಕೈ ಸರ್ಜರಿಯನ್ನು ಮುಂದೂಡಿದ್ದರು. ಐದು ವರ್ಷದ ಹಿಂದೆ ಮಂಡ್ಯಕ್ಕೆ ಬಂದಾಗ ಹೇಗೆ ಪ್ರೀತಿ ತೋರಿಸಿದ್ದಿರೋ ಈಗಲೂ ನಿಮ್ಮ ಪ್ರೀತಿ ಹಾಗೇ ಇದೆ. ನನ್ನನ್ನು ಪ್ರೀತಿಸುವ ಎಲ್ಲರಿಗೂ ನಾನು ಋಣಿಯಾಗಿದ್ದೇನೆ. ಯಮ ನನ್ನೇನಾದರೂ ಕರೆದರೆ, ಒಂದೇ ಒಂದು ಕೆಲಸ ಇದೆ ಮುಗಿಸಿ ಬರ್ತೀನಿ ಎಂದು ಹೇಳಿ ಅಮ್ಮನ ಕೆಲಸ ಮಾಡಿ ಮುಗಿಸುತ್ತೇನೆ. ಅಷ್ಟು ಗೌರವ ಇಟ್ಟುಕೊಂಡಿದ್ದೇನೆ. ಇಂದು ಆಪರೇಷನ್‌ ಆಗಬೇಕಿತ್ತು, ಬಟ್‌ ಅಮ್ಮನಿಗೋಸ್ಕರ ಅದನ್ನು ಬಿಟ್ಟು ಬಂದಿದ್ದೇನೆ ಎಂದು ದರ್ಶನ್‌ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!