ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರವಾಸಿಗರೊಬ್ಬರು ಝಿಪ್ಲೈನ್ ಆಡುವ ವೇಳೆ ವಿಡಿಯೋವೊಂದನ್ನು ರೆಕಾರ್ಡ್ ಮಾಡಿದ್ದರು. ಇದರಲ್ಲಿ ಝಿಪ್ಲೈನ್ ಆಪರೇಟರ್ ಮೂರು ಬಾರಿ ಅಲ್ಲಾಹು ಅಕ್ಬರ್ ಎಂದು ಜೋರಾಗಿ ಕೂಗಿದ್ದಾರೆ. ಹೀಗೆ ಕೂಗಿದ ನಂತರವೇ ದಾಳಿ ನಡೆಯಿತು ಎಂದು ಪ್ರವಾಸಿಗರೊಬ್ಬರು ಮಾಹಿತಿ ನೀಡಿದ್ದಾರೆ.
ಇದು ತಪ್ಪು ಮಾಹಿತಿ, ಕಲ್ಲು ಎಡವಿದರೆ ಹಿಂದುಗಳು ದೇವರ ಹೆಸರು ಹೇಳೋದಿಲ್ವಾ? ಅದೇ ರೀತಿ ಕೆಲಸದ ವೇಳೆ ಬಿರುಗಾಳಿ ಬಂದರೂ ಅಲ್ಲಾಹು ಅಕ್ಬರ್ ಎನ್ನುತ್ತೇವೆ ಎಂದು ಝಿಪ್ಲೈನ್ ಆಪರೇಟರ್ ತಂದೆ ಹೇಳಿದ್ದಾರೆ.
ಅಂದು ಅಲ್ಲಾಹು ಅಕ್ಬರ್ ಎಂದು ಕೂಗಿದ ಜಿಪ್ ಲೈನ್ ಆಪರೇಟರ್ ಮುಜಾಮಿಲ್ ನನ್ನು ತನಿಖಾಧಿಕಾರಿಗಳು ಪಹಲ್ಗಾಮ್ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಮುಜಾಮಿಲ್ ನೇರ ಕೈವಾಡವಿಲ್ಲವಾದರೂ ಉಗ್ರರು ಗುಂಡು ಹಾರಿಸುವ ವೇಳೆ ಮುಜಾಮಿಲ್ ಏಕೆ ಅಲ್ಲಾಹು ಅಕ್ಬರ್ ಎಂದು ಮೂರು ಬಾರಿ ಹೇಳಿದ ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸಿದ್ದಾರೆ.
ಇಸ್ಲಾಮ್ ನಲ್ಲಿ ಅಲ್ಲಾಹು ಅಕ್ಬರ್ ಎಂದು ಕೂಗುವುಗು ತುಂಬಾ ಸಾಮಾನ್ಯ. ನಮ್ಮಲ್ಲಿ ಕಷ್ಟ ಬಂದಾಗ, ಸಂತೋಷವಾದಾಗ, ದುಃಖವಾದಾಗ ಅಲ್ಲಾಹು ಅಕ್ಬರ್ ಎಂದು ಅಲ್ಲಾಹ್ ನನ್ನು ನೆನೆಯುತ್ತೇವೆ. ಅದೇ ರೀತಿ ಅಂದು ಜಿಪ್ ಲೈನ್ ಆಪರೇಟಿಂಗ್ ವೇಳೆ ಪುತ್ರ ಮುಜಾಮಿಲ್ ಕೂಡ ಹಾಗೆ ಕೂಗಿದ್ದಾನೆ. ಅಂದಮಾತ್ರಕ್ಕೆ ಆತನಿಗೆ ಉಗ್ರರೊಂದಿಗೆ ಸಂಬಂಧ ಇದೆ ಎಂದು ಭಾವಿಸುವುದು ಬೇಡ. ಬಿರುಗಾಳಿ ಬಂದರೂ ನಾವು ಅಲ್ಲಾಹು ಅಕ್ಬರ್ ಎಂದು ಹೇಳುತ್ತೇವೆ. ಇದರಲ್ಲಿ ನಮ್ಮ ತಪ್ಪೇನು? ಎಂದು ಆತನ ತಂದೆ ಪ್ರಶ್ನಿಸಿದ್ದಾರೆ.
ಇದೇ ವಿಚಾರ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದು ಈ ಬಗ್ಗೆ ಜಿಪ್ ಲೈನ್ ಅಪರೇಟರ್ ಮುಜಾಮಿಲ್ ತಂದೆ ಅಬ್ದುಲ್ ಅಜೀಜ್ ಸ್ಪಷ್ಟನೆ ನೀಡಿದ್ದಾರೆ.