ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುನಿರೀಕ್ಷಿತ ಮಧ್ಯಂತರ ಬಜೆಟ್ ಮಂಡನೆ ಆರಂಭವಾಗಿದೆ.
ಮಂಡನೆಗೂ ಮುನ್ನ ಜನಾದೇಶದ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿದ್ದಾರೆ.
ಮೋದಿ ಸರ್ಕಾರದಲ್ಲಿ ಆರ್ಥಿಕತೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಕಾಣಿಸಿದೆ. ದೇಶಕ್ಕೆ ಹೊಸ ದಿಕ್ಕು ಹಾಗೂ ಭರವಸೆ ಸಿಕ್ಕಿದೆ. ದೇಶದ ಪ್ರತೀ ವರ್ಗದ ಜನರಿಗೂ ಸೌಲಭ್ಯ ತಲುಪುತ್ತಿದೆ ಎಂದು ಹೇಳಿದ್ದಾರೆ.
2047 ರ ವೇಳೆಗ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತನೆಯಾಗಲಿದೆ, ಇದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಲಾಗುತ್ತದೆ. ಮತ್ತೊಮ್ಮೆ ಜನ ಬಿಜೆಪಿ ಆಯ್ಕೆ ಮಾಡಿ ಉಜ್ವಲ ಜೀವನಕ್ಕೆ ದಾರಿಮಾಡಿಕೊಡುವ ನಂಬಿಕೆ ಇದೆ ಎಂದಿದ್ದಾರೆ.