ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಡುಗೆ ಮನೆಯಲ್ಲಿ ಸಕ್ಕರೆಯ ಬದಲು ಕಲ್ಲು ಸಕ್ಕರೆ ಬಳಸುವುದರಿಂದ ಆಗುವ ಲಾಭಗಳು ನಿಮಗೆ ಗೊತ್ತಾ?
ಹವಾಮಾನದಲ್ಲಿ ಸ್ವಲ್ಪ ಬದಲಾವಣೆಯಾದರೂ ಮಕ್ಕಳಲ್ಲಿ ಕೆಮ್ಮು ಉಂಟಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ಸಿರಪ್ ಬದಲಿಗೆ ಕಾಳುಮೆಣಸಿನ ಪುಡಿಗೆ ಜೇನುತುಪ್ಪ ಅಥವಾ ಕಲ್ಲು ಸಕ್ಕರೆ ಸೇರಿಸಿ ಕೊಡಿ. ಕೆಲವೇ ದಿನಗಳಲ್ಲಿ ಕೆಮ್ಮಿನ ಸಮಸ್ಯೆ ನಿವಾರಣೆಯಾಗುತ್ತದೆ.
ಮಕ್ಕಳನ್ನು ಹೊರತುಪಡಿಸಿ ವಯಸ್ಕರರು ಒಣ ಕೆಮ್ಮಿನಿಂದ ಬಳಲುತ್ತಿದ್ದರೆ, ಅವರ ಬಾಯಿಯಲ್ಲಿ ಕಲ್ಲು ಸಕ್ಕರೆ ಬಾಯಿಯಲ್ಲಿ ಹಾಕಿ ಇಟ್ಟುಕೊಂಡರೆ ಒಳ್ಳೆಯದು. ನಿಮಗೆ ಗಂಟಲು ನೋವು ಇದ್ದರೆ, ನೀವು ಸ್ವಲ್ಪ ತುಪ್ಪ ಮತ್ತು ಕರಿಮೆಣಸಿನ ಪುಡಿಯೊಂದಿಗೆ ಕಲ್ಲು ಸಕ್ಕರೆ ಪುಡಿಯನ್ನು ತಿನ್ನಬಹುದು.
ಹೋಟೆಲ್ಗಳಲ್ಲಿ ಕಲ್ಲು ಸಕ್ಕರೆಗೆ ಸೋಂಪು ಸೇರಿಸಿದ್ದನ್ನು ನೀವು ನೋಡಿರಬಹುದು. ಏಕೆಂದರೆ ಇದರಲ್ಲಿ ಜೀರ್ಣಕ್ರಿಯೆಗೆ ನೆರವಾಗುವ ಗುಣಗಳಿವೆ. ಆದ್ದರಿಂದ ಇದನ್ನು ತಿಂದರೆ ಜೀರ್ಣಕ್ರಿಯೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.