ಪರೀಕ್ಷೆಯಲ್ಲಿ ಅನುತ್ತೀರ್ಣವಾಗುವುದು ಜೀವನದ ಅಂತ್ಯವಲ್ಲ. ಇದು ಯಶಸ್ಸಿನ ಮಾರ್ಗದಲ್ಲಿನ ಒಂದು ಹಂತ ಮಾತ್ರ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾನಸಿಕ ಸ್ಥೈರ್ಯ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ತಮ್ಮ ದೌರ್ಬಲ್ಯಗಳನ್ನು ಅರಿತು, ಮುಂದಿನ ಭವಿಷ್ಯಕ್ಕೆ ತಯಾರಿ ಮಾಡುವ ಅವಕಾಶವನ್ನಾಗಿ ಬಳಸಿಕೊಳ್ಳಬೇಕು. ಅನುತ್ತೀರ್ಣರಾದ ವಿದ್ಯಾರ್ಥಿಗಳು ಮಾನಸಿಕವಾಗಿ ಶಕ್ತಿಶಾಲಿಗಳಾಗಲು 5 ಅಂಶಗಳನ್ನು ಪಾಲಿಸಿ.
ಸ್ವೀಕೃತಿಯ ಮನೋಭಾವ
ಅನುತ್ತೀರ್ಣನಾಗಿದ್ದೇನೆ ಎಂಬುದನ್ನು ಒಪ್ಪಿಕೊಳ್ಳುವುದು ಮಾನಸಿಕ ಸ್ಥೈರ್ಯದ ಮೊದಲ ಹೆಜ್ಜೆ. ತಪ್ಪುಗಳನ್ನೂ ತಿಳಿದುಕೊಂಡು ಮುಂದಿನ ದಾರಿಗಾಗಿ ಆತ್ಮಪರಿಶೀಲನೆ ಮಾಡುವುದು ಬಹುಮುಖ್ಯ.
ಸಕಾರಾತ್ಮಕ ಚಿಂತನೆ
ಜೀವನ ಒಂದು ಪರೀಕ್ಷೆಯಲ್ಲ, ಪ್ರಯಾಣ. ಸೋಲಿನಿಂದ ಪಾಠ ಕಲಿಯುವುದು ಯಶಸ್ಸಿಗೆ ದಾರಿ. ಸದಾ ಸಕಾರಾತ್ಮಕವಾಗಿ ಚಿಂತಿಸಿ, ಹೊಸದಾಗಿ ಪ್ರಾರಂಭಿಸುವ ವಿಶ್ವಾಸವಿರಲಿ.
ಆತ್ಮವಿಶ್ವಾಸ ಬೆಳೆಸಿಕೊಳ್ಳಿ
ಒಂದೆರಡು ಪರೀಕ್ಷೆಗಳ ಫಲಿತಾಂಶದಿಂದ ನಿಮ್ಮ ಸಾಮರ್ಥ್ಯ ತೀರ್ಮಾನಿಸಲಾಗದು. ನಿಮ್ಮನ್ನು ನಂಬಿ, ನಿಮ್ಮ ಗುರಿಯನ್ನು ನೆನಪಿಸಿಕೊಂಡು ಮುನ್ನಡೆಯಿರಿ.
ಮನೆಮಾತು, ಸ್ನೇಹಿತರಿಂದ ಬೆಂಬಲ
ಕುಟುಂಬ ಸದಸ್ಯರು, ಸ್ನೇಹಿತರು, ಗುರುಗಳು ಇಂತಹ ಸಮಯದಲ್ಲಿ ಶಕ್ತಿ ನೀಡುವವರು. ಅವರಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ, ಅವರ ಮಾರ್ಗದರ್ಶನ ಪಡೆಯಿರಿ.
ಹೊಸ ಗುರಿ ನಿಶ್ಚಯಿಸಿ
ಹಿಂದೆ ನಡೆದ್ದನ್ನು ಬಿಟ್ಟು ಮುಂದೆ ಯಾವ ಗುರಿ ಸಾಧಿಸಬೇಕು ಎಂಬುದರ ಮೇಲೆ ಗಮನ ಕೇಂದ್ರೀಕರಿಸಿ. ಪುನಃ ಪ್ರಯತ್ನಿಸಲು ಹೊಸ ಯೋಜನೆ ರೂಪಿಸಿ.