ತಂದೆಯಿಂದಲೇ ಮಗನ ಕುತ್ತಿಗೆಗೆ ಚಾಕು ಇರಿತ

ಹೊಸದಿಗಂತ ವರದಿ ಹುಬ್ಬಳ್ಳಿ: 

ಮಗನು ಕಿರುಕುಳ ನೀಡುತ್ತಿದ್ದ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ತಂದೆ ಸ್ವತಃ ಮಗನ ಕುತ್ತಿಗೆಗೆ ಚಾಕುವಿನಿಂದ ಇರಿದ ಘಟನೆ ಮಂಗಳವಾರ ಬೆಳಿಗಿನ ಜಾವ 4.30ಕ್ಕೆ ಕ್ಕೆ ಹಳೆ ಹುಬ್ಬಳ್ಳಿ ಹೆಗ್ಗೇರಿ‌ ಆಯುರ್ವೇದ ಕಾಲೇಜಿನ ಬಳಿ ನಡೆದಿದೆ.

ಜಗದೀಶ ಸುಗೂರ ಚಾಕೂ ಇರಿತಕ್ಕೊಳಗಾದ ವ್ಯಕ್ತಿ. ತಂದೆ ಶಂಕರ ರಾಮಕೃಷ್ಣ ಸೂಗೂರ ಎಂಬುವರಿಗೆ ಪದೆ ಪದೇ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಸೋಮವಾರು ತಂದೆ ತಾಯಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲದೇ ಕೈಯಲ್ಲಿ ಸಿಕ್ಕಿದ ವಸ್ತುಗಳಿಂದ ಹಲ್ಲೆ ನಡೆಸಿದ್ದಾನೆ. ಇದಕ್ಕೆ ಆಕ್ರೋಶಕೊಂಡ ತಂದೆ ಮಗನ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ.

ಸದ್ಯ ಜಗದೀಶ ಸೂಗೂರ ನನ್ನು ನಗರದ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ರವಾನಿಸಲಾಗಿದೆ. ಕುತ್ತಿನ ಭಾಗಕ್ಕೆ ಇರಿದ ಹಿನ್ನೆಲೆ ಅತಿಯಾದ ರಕ್ತಸ್ರಾವವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹಳ್ಳೆ ಹುಬ್ಬಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!