ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ನಿಷೇಧದ ಹೊರತಾಗಿಯೂ ಮಲ ಹೊರುವ ಪದ್ಧತಿ ಇರುವುದರಿಂದ ಹೈಕೋರ್ಟ್(High Court)ನಿಂದ ಸ್ವಯಂಪ್ರೇರಿತ ಪಿಐಎಲ್(PIL) ದಾಖಲು ಮಾಡಲಾಗಿದೆ.
ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ರಿದ್ದ ಹೈಕೋರ್ಟ್ ಪೀಠ ,ಬಡತನ ಮತ್ತು ಜಾತಿಯ ಕಾರಣಕ್ಕೆ ಅನಿಷ್ಟ ಪದ್ಧತಿ ಜೀವಂತವಿರುವುದು ಶೋಚನೀಯ ಎಂದು ಆಕ್ರೋಶ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ವರಾಳೆ ಅವರು ‘ ಮಣ್ಣಿಗಾದರೂ ಮೌಲ್ಯವಿದೆ, ಮನುಷ್ಯರಿಗಿಲ್ಲ. ಹಣದಿಂದ ಮರ್ಯಾದೆ ಅಳೆಯದ ದಿನ ಎಂದಾದರೂ ಬರಲಿ ಎಂಬ ಕವಿ ಸಾಯಿದ್ ಲೂಧಿಯಾನ್ವಿ ಕವಿತೆಯನ್ನು ಉಲ್ಲೇಖಿಸಿದ್ದಾರೆ.
ಎಲ್ಲ ಗ್ರಾಮಗಳಲ್ಲಿ ಸ್ವಚ್ಚ ಭಾರತ ಗೊತ್ತಿದೆ. ಆದರೆ, ಮಲ ಹೊರುವುದರ ನಿಷೇಧದ ಅರಿವಿಲ್ಲ. ಮಲದ ಗುಂಡಿ ಸಚ್ಛತೆಗೆ ಯಂತ್ರಗಳಿದ್ದರೂ ಮನುಷ್ಯರನ್ನು ಬಳಸುತ್ತಿರುವುದೇಕೆ. ಬಡತನದ ಕಾರಣಕ್ಕೆ ಪ್ರಾಣಿಯಂತಹ ಜೀವನ ನಡೆಸಬೇಕೇ?, ಇದು ಮಾನವ ಸಮಾಜವೇ ನಾಚಿಕೆ ಪಡಬೇಕಾದ ವಿಚಾರವಾಗಿದೆ.
ಈ ಕುರಿತು ಜನವರಿ.8 ಕ್ಕೆ ಪಿಐಎಲ್ ವಿಚಾರಣೆ ನಡೆಸಲು ಹೈಕೋರ್ಟ್ ನಿರ್ಧಾರ ಮಾಡಿದೆ. ಜೊತೆಗೆ ಕೋರ್ಟ್ಗೆ ಸಲಹೆ ನೀಡಲು ಅಮೈಕಸ್ ಕ್ಯೂರಿಯಾಗಿ ವಕೀಲ ಶ್ರೀಧರ್ ಪ್ರಭು ಎಂಬುವವರು ನೇಮಕ ಮಾಡಲಾಗಿದೆ.