ಹು-ಧಾ ವ್ಯಾಪ್ತಿಯಲ್ಲಿ ಐದು ಲವ್‌ ಜಿಹಾದ್‌ ಪ್ರಕರಣ: ತನಿಖೆ ನಡೆಸಿ ಎಂದ ಸಿ.ಟಿ. ರವಿ

ದಿಗಂತ ವರದಿ ಹುಬ್ಬಳ್ಳಿ:

ಕಳೆದ ಒಂದೂವರೆ ತಿಂಗಳಲ್ಲಿ ಹುಬ್ಬಳ್ಳಿ ಧಾರವಾಡ ವ್ಯಾಪ್ತಿಯಲ್ಲಿ ಐದು ಹಾಗೂ ವಿವಿಧೆಡೆಯು ಸಹ ಲವ್ ಜಿಹಾದ್ ಶಂಕೆ ಇರುವ ಪ್ರಕರಣ ದಾಖಲಾಗಿವೆ. ರಾಜ್ಯ ಸರ್ಕಾರ ಈ ಎಲ್ಲ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ(ಎಸ್ ಐಟಿ) ರಚಿಸಿ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಸಿ.ಟಿ. ರವಿ ಆಗ್ರಹಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಶುಕ್ರವಾರ ವಾರ ಲವ್ ಜಿಹಾದ ರೂಪದ ಪ್ರಕರಣ ದಾಖಲಾಗಿದೆ. ಸಿದ್ಧಾಪುರ, ತಿಪಟೂರು ನಲ್ಲಿ ಸಹ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಹೋದರರೆನ್ನುವ ಹಿಂದೂ ಯುವತಿ ಅಪಹರಣ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಎಲ್ಲ ಅಪಾಧಿತರು ಒಂದು‌ ಕೋಮಿಗೆ ಸೇರಿದವರಾಗಿದ್ದಾರೆ. ಲವ್ ಜಿಹಾದ್ ಯೋಜನೆ ಬದ್ಧವಾಗಿದೆ ಮಾಡುತ್ತಿದ್ದು, ಮುಸ್ಲಿಮರು ಹಿಂದೂ ಯುವತಿಯರನ್ನು ಗುರಿಪಡಿಸಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಹಿಂದೆ ಕೇರಳದಲ್ಲಿ ಇಂತಹ ಪ್ರಕರಣ ಹೆಚ್ಚಾದಾಗ ಸರ್ಕಾರ ಎಸ್ ಐಟಿ ರಚಿಸಿ ತನಿಖೆ ಕೈಗೊಂಡಿದ್ದು, ಅಲ್ಲಿಯ ನ್ಯಾಯಾಲಯವು ಪ್ರಕರಣ ಗಳ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!