ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಳು ಬಾವಿಗೆ ಬಿದ್ದಿದ್ದ ಬೆಕ್ಕನ್ನು ರಕ್ಷಣೆ ಮಾಡಲು ಹೋಗಿ ಐವರು ತಮ್ಮ ಪ್ರಾಣವನ್ನು ಕಳೆದುಕೊಂಡ ದಾರುಣ ಘಟನೆ ಮಹಾರಾಷ್ಟ್ರದ ಅಹಮದ್ನಗರದ ವಾಡ್ಕಿ ಗ್ರಾಮದಲ್ಲಿ ನಡೆದಿದೆ.
ಪಾಳು ಬಿದ್ದ ಬಾವಿಯನ್ನು ಬಯೋ ಗ್ಯಾಸ್ ಸ್ಥಳವಾಗಿ ಪರಿವರ್ತನೆ ಮಾಡಲಾಗಿತ್ತು. ತಡರಾತ್ರಿಯಲ್ಲಿ ಸಗಣಿ ತುಂಬಿದ್ದ ಬಾವಿಗೆ ಬೆಕ್ಕಿ ಬಿದ್ದಿದೆ. ಇದನ್ನು ಕಂಡ ಆರು ಜನರ ಗುಂಪು ಬೆಕ್ಕಿನ ರಕ್ಷಣೆಗೆ ಪಣ ತೊಟ್ಟಿದ್ದಾರೆ.
ಆರರಲ್ಲಿ ಐದು ಮಂದಿ ಆಯತಪ್ಪಿ ಬಾವಿಗೆ ಬಿದ್ದಿದ್ದು, ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಮಾಣಿಕರಾವ್ ಗೋವಿಂದ ಕಾಳೆ, ಸಂದೀಪ್ ಮಾಣಿಕ್ ಕಾಳೆ, ಅನಿಲ್ ಬಾಪುರಾವ್ ಕಾಳೆ, ವಿಶಾಲ್ ಅನಿಲ್ ಕಾಳೆ ಹಾಗೂ ಬಾಬಾಸಾಹೇಬ್ ಪವಾರ್ ಮೃತರು.
ಹಗ್ಗ ಕಟ್ಟಿ ವ್ಯಕ್ತಿಯೊಬ್ಬನನ್ನು ಕೆಳಕ್ಕೆ ಇಳಿಸಿ ಐದೂ ಮಂದಿ ಹಗ್ಗದ ಇನ್ನೊಂದು ತುದಿಯನ್ನು ಹಿಡಿದುಕೊಂಡಿದ್ದಾರೆ. ಆರೂ ಜನರು ಬಾವಿಗೆ ಬಿದ್ದಿದ್ದು, ಪೊಲೀಸರು ಒಬ್ಬರನ್ನು ರಕ್ಷಣೆ ಮಾಡಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಐದು ಮೃತದೇಹಗಳನ್ನು ಬಾವಿಯಿಂದ ಹೊರತೆಗೆಯಲಾಗಿದೆ.
#WATCH | Five people died in a bid to save a cat who fell into an abandoned well (used as a biogas pit) in Wadki village of Ahmednagar, Maharashtra, late at night.
According to Dhananjay Jadhav, Senior Police Officer of Nevasa Police station, Ahmednagar, “A rescue team… pic.twitter.com/fb4tNY7yzD
— ANI (@ANI) April 10, 2024