9ನೇ ಕ್ಲಾಸ್​ಗೆ ಪ್ಯೂನ್ ಕೆಲಸವೂ ಸಿಗಲ್ಲ, ಆದರೆ ತೇಜಸ್ವಿ ಯಾದವ್​ ರಾಜ್ಯದ ಡಿಸಿಎಂ: ಪ್ರಶಾಂತ್ ಕಿಶೋರ್ ಲೇವಡಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ವಿರುದ್ಧ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಟೀಕಾ ಪ್ರಹಾರ ನಡೆಸಿದ್ದಾರೆ. ತೇಜಸ್ವಿ ಯಾದವ್​ ಕೇವಲ 9ನೇ ತರಗತಿ ಓದಿದ್ದಾರೆ. ಈ ವಿದ್ಯಾಹರ್ತೆಗೆ ಪ್ಯೂನ್ ಕೆಲಸ ಕೂಡಾ ಸಿಗುವುದಿಲ್ಲ. ಆದರೆ ಇವಾಗ ಅವರೇ ರಾಜ ಎಂದು ಲೇವಡಿ ಮಾಡಿದ್ದಾರೆ.

ಜನರೊಂದಿಗೆ ಮಾತನಾಡಿದ ಪ್ರಶಾಂತ್ ಕಿಶೋರ್, ಲಾಲು ಪ್ರಸಾದ್​ ಯಾದವ್ ಅವರ ಮಗ 9 ನೇ ತರಗತಿ ಪಾಸಾಗಿ ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದಾರೆ. ನಿಮ್ಮ ಮಕ್ಕಳು 9ನೇ ತರಗತಿ ತೇರ್ಗಡೆಯಾಗಿದ್ದರೆ ಪ್ಯೂನ್ ಕೆಲಸ ಸಿಗುತ್ತದೆಯೇ? ಎಂದು ಪ್ರಶ್ನಿಸಿದ ಅವರು, ಇವತ್ತು ಮಂತ್ರಿ -ಶಾಸಕರ ಪುತ್ರರೇ ಆಡಳಿತ ನಡೆಸುತ್ತಾರೆ. ಅದನ್ನು ಮೊದಲು ಬದಲಾಯಿಸಬೇಕಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!