ಹೊಸ ದಿಗಂತ ವರದಿ, ವಿಜಯಪುರ:
ಚಿನ್ನಕ್ಕಾಗಿ ವೃದ್ಧನೊಬ್ಬನ ಕಿವಿ ಕತ್ತರಿಸಿ, ಅನಂತರ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾದ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ರಾಂಪೂರ ಪಿಎ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಮಡಿವಾಳಪ್ಪ ಭೀಮರಾಯ ಪೂಜಾರಿ ಹತ್ಯೆಯಾಗಿರುವ ದುರ್ದೈವಿ.
ದುಷ್ಕರ್ಮಿಗಳು ಮಡಿವಾಳಪ್ಪನ ಬಲಗಡೆಯ ಕಿವಿ ಕತ್ತರಿಸಿ ಚಿನ್ನ ದೋಚಿ, ಅನಂತರ ಹತ್ಯೆಗೈದು ಓಡಿಹೋಗಿದ್ದಾರೆ.
ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.