ವಿದೇಶಿಯರ ಮನಸೆಳೆದ ಆತ್ಮನಿರ್ಭರ ಭಾರತ: ಬಾಬಾ ಸಾಹೇಬ

ಹೊಸದಿಗಂತ ವರದಿ, ಹುಬ್ಬಳ್ಳಿ:

ದೇಶ ಉದಯೋನ್ಮುಕ ತಂತ್ರಜ್ಞಾನ ಮತ್ತು ಕೌಶಲ್ಯ ಸದುಪಯೋಗ ಪಡಿಸಿಕೊಂಡು ವಿಶ್ವನಾಯಕನಾಗಲು ಸಿದ್ಧವಾಗಿದೆ. ಹಲವಾರು ಬದಲಾವಣೆಯಿಂದ ಆರ್ಥಿಕ ಬೆಳವಣಿಗೆಯ ದಾಖಲಿಸುವ ತುದಿಯಲ್ಲಿದ್ದೇವೆ ಎಂದು ಕಲ್ಯಾಣಿ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಪದ್ಮಭೂಷಣ ಬಾಬಾ ಸಾಹೇಬ ಎನ್. ಕಲ್ಯಾಣಿ ಹೇಳಿದರು.

ಭಾನುವಾರ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ೨ ನೇ ಮತ್ತು ೩ ನೇ ಘಟಿಕೋತ್ಸವ ಸಮಾರಂಭದಲ್ಲಿ ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಪಡೆದು ಮಾತನಾಡಿದರು.

ಕೊರೋನಾ ಸಮಯದಲ್ಲಿ ಇಷ್ಟೊಂದು ಜನ ಸಂಖ್ಯೆ ಹೊಂದಿದ್ದರು ಎಲ್ಲ ಸವಾಲುಗಳನ್ನು ಸುಲಭವಾಗಿ ಎದುರಿಸಿದೆವು. ಪ್ರಧಾನಿಯವರ ಮಾತು ಮತ್ತು ದೇಶದ ಜನರ ಸಾಮೂಹಿಕ ಇಚ್ಛೆ ಮೂಲಕ ಕಾರಣ. ಆದರೆ ಕೆಲವು ದೇಶಗಳು ರೋಗದ ಭಯದಲ್ಲಿ ಬದುಕುತ್ತಿದ್ದಾರೆ. ಆತ್ಮನಿರ್ಭರ ಭಾರತ ದೇಶದ ಜನರು ಅಷ್ಟೇ ಅಲ್ಲದೆ ವಿದೇಶಿಯರ ಮನಸೇಳೆಯಿತು. ಸ್ವತಃ ನಾವೇ ಲಸಿಕೆ ಸೇರಿದಂತೆ ಅನೇಕ ವೈದ್ಯಕೀಯ ಉಪಕರಣಗಳನ್ನು ತಯಾರಿಸಿದೆವು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!