ಹೊಸದಿಗಂತ ಡಿಜಿಟಲ್ ಡೆಸ್ಕ್:
ಮತದಾನಕ್ಕಾಗಿ ಶಿಕಾರಿಪುರಕ್ಕೆ ತೆರಳಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕುಟುಂಬ ಮತದಾನಕ್ಕೂ ಮುನ್ನ ರಾಯರ ಮಠಕ್ಕೆ ತೆರಳಿ ರಾಘವೇಂದ್ರ ಸ್ವಾಮಿಯ ದರುಶನ ಪಡೆದಿದೆ.
ನಂತರ ಸುದ್ದಿಗಾರರ ಜತೆ ಬಿಎಸ್ವೈ ಮಾತನಾಡಿದ್ದು, ವಿಜಯೇಂದ್ರ ಅವರಿಗೆ 40 ಸಾವಿರಕ್ಕೂ ಹೆಚ್ಚು ಮತಗಳು ಬಂದೇ ಬರುತ್ತವೆ, ಮೆಜಾರಿಟಿ ಸಾಧಿಸಿ ಸರ್ಕಾರ ರಚಿಸುವುದರಲ್ಲಿ ಅನುಮಾನ ಇಲ್ಲ. ಜನರ ಅದ್ಭುತ ಉತ್ಸಾಹ ನಮಗೆ ಇನ್ನಷ್ಟು ಶಕ್ತಿ ನೀಡಿದೆ ಎಂದು ಹೇಳಿದ್ದಾರೆ.
#WATCH | #KarnatakaElections | Former Karnataka CM and senior BJP leader BS Yediyurappa visits and offers prayers at Raghavendra Swamy Mutt in Shikaripura, along with his family.
His son, BY Vijayendra is contesting from the Assembly constituency. pic.twitter.com/wy1LFoBA88
— ANI (@ANI) May 10, 2023