ಮಾಜಿ ಸಿಎಂ ಸಿದ್ದರಾಮಯ್ಯ ತಲೆ ಕೆಟ್ಟಿದೆ: ಸಚಿವ ಉಮೇಶ ಕತ್ತಿ

ಹೊಸದಿಗಂತ ವರದಿ, ಅಂಕೋಲಾ:

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಲೆ ಕೆಟ್ಟಿದೆ, ಹೀಗಾಗಿ ಅಧಿಕಾರ ಕಳೆದು ಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು.

ಹಿಂದು ಸಂಘಟನೆಗಳ ಮೇಲೆ ಬುಲ್ಡೋಜರ್ ಹತ್ತಿಸಬೇಕು ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿ, ಪದೇ ಪದೇ ಅವರ ಬಗ್ಗೆ ನನಗೆ ಕೇಳಬೇಡಿ. ಅವರೊಬ್ಬ ಸೀನಿಯರ್, ಮಾಜಿ ಮುಖ್ಯಮಂತ್ರಿ, ಮುಂದೆಂದೂ ಮುಖ್ಯಮಂತ್ರಿ ಆಗುವ ಲಕ್ಷಣ ಅವರಿಗಿಲ್ಲ. ಹೀಗಾಗಿ ಅವರು ಹೇಳಿಕೆ ಕೊಡುತ್ತಾರೆ ಎಂದರು.

ಜಿಲ್ಲೆಗೆ ಸಚಿವ ಸ್ಥಾನ ಹಾಗೂ ಸಚಿವ ಸಂಪುಟದ ವಿಸ್ತರಣೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಸಚಿವ ಸಂಪುಟ ವಿಸ್ತರಣೆ ಅಥವಾ ಸಂಪುಟ ಬದಲಾವಣೆ ಆಗುತ್ತದೆ. ಅದು ಎನೇ ಮಾಡಿದ್ದರು ಹೈ ಕಮಾಂಡ್ ನಿಂದ ಆಗುತ್ತದೆ. ಜಿಲ್ಲೆಗೂ ಸಚಿವ ಸ್ಥಾನ ಸಿಗುತ್ತದೆ. ಕೆಲವು ದಿನ ಕಾದು ನೋಡಿ. ಅದೆಲ್ಲವೂ ಹೈ ಕಮಾಂಡ್ ತೀರ್ಮಾನ. ಅದು ನಾನೇ ಹೇಳಬೇಕು ಎಂದರೆ ಹೇಳಲಾಗಲ್ಲ. ನಾನು ಈಗ ಮಂತ್ರೀ ಇದ್ದೇನೆ, ಮುಂದೆ ಸಚಿವ ಸ್ಥಾನದಿಂದ ತಗೆಯಬಹುದು, ಬಸನಗೌಡ ಪಾಟೀಲ ಯತ್ನಾಳ ಅವರನ್ನು ತೆಗೆದುಕೊಳ್ಳಬಹುದು. ಅದು ಹೈ ಕಮಾಂಡ್ ಗೆ ಬಿಟ್ಟ ವಿಚಾರ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!