ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ನ ಮಾಜಿ ನಾಯಕ, ಸಿ ರಾಜಗೋಪಾಲಾಚಾರಿ ( C Rajagopalachari) ಅವರ ಮರಿಮೊಮ್ಮಗ ಸಿಆರ್ ಕೇಶವನ್ (CR Keshavan) ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಪ್ರಧಾನಿ ಮೋದಿಯವರ ಜನಪರ ನೀತಿಗಳು, ಭ್ರಷ್ಟಾಚಾರ ರಹಿತ ಆಡಳಿತ ಮತ್ತು ಸುಧಾರಣೆ ನೀತಿ, ಅಂತರ್ಗತ ಅಭಿವೃದ್ಧಿ ಕಾರ್ಯಸೂಚಿ, ಭಾರತವನ್ನು ದುರ್ಬಲ ಆರ್ಥಿಕತೆಯಿಂದ ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿ ಪರಿವರ್ತಿಸುತ್ತಿರುವುದು ನೋಡಿ ನಾನು (ಸಿಆರ್ ಕೇಶವನ್) ಸೇರ್ಪಡೆಯಾಗಿದ್ದೇನೆ ಎಂದು ಹೇಳಿದರು.
ನನ್ನನ್ನು ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಬಿಜೆಪಿಗೆ ಸೇರಿಸಿದ್ದಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ ಇದೀಗ ಈ ಎಲ್ಲ ರಾಜಕೀಯ ಚಟುವಟಿಕೆ ಪ್ರಧಾನಿ ಮೋದಿ ತಮಿಳುನಾಡಿನಲ್ಲಿರುವಾಗ ನಡೆದದ್ದು ಇನ್ನು ವಿಶೇಷವಾಗಿತ್ತು ಎಂದು ಸಿಆರ್ ಕೇಶವನ್ ಹೇಳಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಮನೆ ಪಡೆದವರು ನನಗೆ ಗೊತ್ತು. 3 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. ಅಮಿತ್ ಶಾ ಅವರು ಡಿಬಿಟಿ ಈ ಹಿಂದೆ ‘ಡೀಲರ್ ಬ್ರೋಕರ್ ಟ್ರಾನ್ಸ್ಫರ್’ ಎಂದು ಹೇಳಿದ್ದರು, ಆದರೆ ಈಗ ಅದು ನೇರ ಲಾಭದ ವರ್ಗಾವಣೆಯಾಗಿದೆ ಎಂದು ಅವರು ಪ್ರಧಾನಿಯನ್ನು ಶ್ಲಾಘಿಸಿದರು.
ಕಾಂಗ್ರೆಸ್ ಮಾಧ್ಯಮ ಪ್ಯಾನಲಿಸ್ಟ್ ಮತ್ತು ಭಾರತದ ಮೊದಲ ಗವರ್ನರ್ ಜನರಲ್ ಸಿ ರಾಜಗೋಪಾಲಾಚಾರಿ ಅವರ ಮೊಮ್ಮಗ ಸಿಆರ್ ಕೇಶವನ್ ಅವರು ಫೆಬ್ರವರಿಯಲ್ಲಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನು ಮಾಡಿದರು, ಎರಡು ದಶಕಗಳಿಂದ ಪಕ್ಷಕ್ಕಾಗಿ ಕೆಲಸ ಮಾಡಿದೆ. ಆದರೆ ಅಲ್ಲಿ ನನ್ನ ಕೆಲಸಕ್ಕೆ ಯಾವುದೇ ಗೌರವ ನೀಡಿಲ್ಲ ಎಂದು ಹೇಳಿದ್ದಾರೆ.