ಮಾಜಿ ಕ್ರಿಕೆಟರ್​​ ಎಸ್ .ಶ್ರೀಶಾಂತ್​ ಗೆ ಶಾಕ್: ಕೇರಳ ಕ್ರಿಕೆಟ್ ಸಂಸ್ಥೆಯಿಂದ 3 ವರ್ಷ ಅಮಾನತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಮ್ ಇಂಡಿಯಾದ ಮಾಜಿ ಕ್ರಿಕೆಟ್ ಆಟಗಾರ​ ಎಸ್​ ಶ್ರೀಶಾಂತ್ ಅವರನ್ನು ಕೇರಳ ಕ್ರಿಕೆಟ್ ಸಂಸ್ಥೆಯಿಂದ ಮೂರು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ.

2025ರ ಚಾಂಪಿಯನ್ ಟ್ರೋಫಿ ವೇಳೆ ಭಾರತ ತಂಡದಿಂದ ಕೇರಳದ ಯುವ ಪ್ಲೇಯರ್​ ಸಂಜು ಸ್ಯಾಮ್ಸನ್​ ಅವರನ್ನು ಹೊರಗಿಡಲಾಗಿತ್ತು. ಈ ಸಂಬಂಧ ಕೆಸಿಎ ವಿರುದ್ಧ ಎಸ್​ಶ್ರೀಶಾಂತ್ ಅವರು ಸುಳ್ಳು ಹಾಗೂ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು ತಿಳಿದು ಬಂದಿತ್ತು. ಇದೇ ಕಾರಣದಿಂದ ಶ್ರೀಶಾಂತ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಕೇರಳ ಕ್ರಿಕೆಟ್​ ಲೀಗ್​ನಲ್ಲಿ ಎಸ್​.ಶ್ರೀಶಾಂತ್ ಅವರು ಅರಿಯಾಸ್​ ಕೊಲ್ಲಂ ಸೈಲಾರ್ಸ್​ ಫ್ರಾಂಚೈಸಿಯ ಸಹ ಮಾಲೀಕತ್ವ ಹೊಂದಿದ್ದಾರೆ. ಶ್ರೀಶಾಂತ್ ಅವರು ನೀಡಿದ ಹೇಳಿಕೆ ಸಂಬಂಧ ಕೆಸಿಎ ಏಪ್ರಿಲ್​ 30 ರಂದು ಸಾಮಾನ್ಯ ಸಭೆಯನ್ನು ಕೈಗೊಂಡಿತ್ತು. ಇದೇ ಸಭೆಯಲ್ಲಿ ಎಸ್​.ಶ್ರೀಶಾಂತ್​ ಅವರನ್ನು 3 ವರ್ಷಗಳ ಕಾಲ ಕೆಸಿಎ ಸಂಬಂಧಿಸಿದ ಕ್ರಿಕೆಟ್​ನ ಎಲ್ಲ ​ ಚಟುವಟಿಕೆಗಳಿಂದ ಹೊರಗಿಡಲಾಗಿದೆ ಎನ್ನುವ ನಿರ್ಣಯ ತೆಗೆದುಕೊಳ್ಳಲಾಗಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!