ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾದ ಮಾಜಿ ಕ್ರಿಕೆಟ್ ಆಟಗಾರ ಎಸ್ ಶ್ರೀಶಾಂತ್ ಅವರನ್ನು ಕೇರಳ ಕ್ರಿಕೆಟ್ ಸಂಸ್ಥೆಯಿಂದ ಮೂರು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ.
2025ರ ಚಾಂಪಿಯನ್ ಟ್ರೋಫಿ ವೇಳೆ ಭಾರತ ತಂಡದಿಂದ ಕೇರಳದ ಯುವ ಪ್ಲೇಯರ್ ಸಂಜು ಸ್ಯಾಮ್ಸನ್ ಅವರನ್ನು ಹೊರಗಿಡಲಾಗಿತ್ತು. ಈ ಸಂಬಂಧ ಕೆಸಿಎ ವಿರುದ್ಧ ಎಸ್ಶ್ರೀಶಾಂತ್ ಅವರು ಸುಳ್ಳು ಹಾಗೂ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು ತಿಳಿದು ಬಂದಿತ್ತು. ಇದೇ ಕಾರಣದಿಂದ ಶ್ರೀಶಾಂತ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಕೇರಳ ಕ್ರಿಕೆಟ್ ಲೀಗ್ನಲ್ಲಿ ಎಸ್.ಶ್ರೀಶಾಂತ್ ಅವರು ಅರಿಯಾಸ್ ಕೊಲ್ಲಂ ಸೈಲಾರ್ಸ್ ಫ್ರಾಂಚೈಸಿಯ ಸಹ ಮಾಲೀಕತ್ವ ಹೊಂದಿದ್ದಾರೆ. ಶ್ರೀಶಾಂತ್ ಅವರು ನೀಡಿದ ಹೇಳಿಕೆ ಸಂಬಂಧ ಕೆಸಿಎ ಏಪ್ರಿಲ್ 30 ರಂದು ಸಾಮಾನ್ಯ ಸಭೆಯನ್ನು ಕೈಗೊಂಡಿತ್ತು. ಇದೇ ಸಭೆಯಲ್ಲಿ ಎಸ್.ಶ್ರೀಶಾಂತ್ ಅವರನ್ನು 3 ವರ್ಷಗಳ ಕಾಲ ಕೆಸಿಎ ಸಂಬಂಧಿಸಿದ ಕ್ರಿಕೆಟ್ನ ಎಲ್ಲ ಚಟುವಟಿಕೆಗಳಿಂದ ಹೊರಗಿಡಲಾಗಿದೆ ಎನ್ನುವ ನಿರ್ಣಯ ತೆಗೆದುಕೊಳ್ಳಲಾಗಿದೆ.