ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕಾಂಗ್ರೆಸ್ ನ ಹಿರಿಯ ನಾಯಕ ಮತ್ತು ಪಂಜಾಬ್ ಮಾಜಿ ಹಣಕಾಸು ಸಚಿವ ಮನ್ಪ್ರೀತ್ ಸಿಂಗ್ ಬಾದಲ್ ಅವರು ಇಂದು ಬಿಜೆಪಿಗೆ ಸೇರಿದರು.
ಈ ಕುರಿತು ರಾಹುಲ್ ಗಾಂಧಿಗೆ ರಾಜೀನಾಮೆ ಪತ್ರ ಬರೆದಿರುವ ಬಾದಲ್, ಕಾಂಗ್ರೆಸ್’ನಿಂದ ಭ್ರಮನಿರಸನಗೊಂಡಿರುವುದಾಗಿ ಹೇಳಿದ್ದಾರೆ.
‘ಪಕ್ಷ ಮತ್ತು ಸರ್ಕಾರ ಎರಡರಲ್ಲೂ ನನಗೆ ಗೌರವ ಹೊಂದಿರುವ ಪ್ರತಿಯೊಂದು ಹುದ್ದೆಗೆ ನಾನು ನನ್ನ ಶಕ್ತಿಯನ್ನ ಮೀಸಲಿಟ್ಟಿದ್ದೇನೆ. ನನಗೆ ಈ ಅವಕಾಶಗಳನ್ನ ಒದಗಿಸಿದ್ದಕ್ಕಾಗಿ ಮತ್ತು ಈ ಹಿಂದೆ ನೀವು ನನಗೆ ತೋರಿಸಿದ ದಯೆ ಮತ್ತು ಸೌಜನ್ಯಕ್ಕಾಗಿ ನಾನು ಧನ್ಯವಾದಗಳನ್ನ ಅರ್ಪಿಸುತ್ತೇನೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.