ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಡಿಲು ಬಡಿದು ನಾಲ್ವರು ಕೂಲಿ ಕಾರ್ಮಿಕರು ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರಪ್ರದೇಶದ ಎಲೂರು ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೊಟ್ಟೆಪಾಡಿಗಾಗಿ ದುಡಿಯಲು ಹೋದವರ ಮೇಲೆ ಪ್ರಕೃತಿ ಸೇಡು ತೀರಿಸಿಕೊಂಡಿದೆ. ಈ ಘಟನೆಯಿಂದ ಅವರ ಕುಟುಂಬದಲ್ಲಿ ತೀವ್ರ ನೀರವ ಮೌನ ಆವರಿಸಿದೆ.
ಏಲೂರು ಜಿಲ್ಲೆಯ ಲಿಂಗಪಾಲೆಂ ಮಂಡಲದ ಬೋಗೋಲು ಎಂಬಲ್ಲಿ ಮಧ್ಯರಾತ್ರಿ ವೇಳೆ ಸಿಡಿಲು ಬಡಿದಿದೆ. ಕಾರ್ಮಿಕರು ನೀಲಗಿರಿ ಮರದ ತುಂಡುಗಳನ್ನು ತೆಗೆಯುತ್ತಿದ್ದಾಗ ಸಿಡಿಲು ಬಡಿದಿದೆ ಎನ್ನಲಾಗಿದೆ. ನಾಲ್ವರ ಮೃತದೇಹಗಳನ್ನು ಏಲೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.