ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ ನೀಡಲಾಗುತ್ತದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಉಗ್ರ ದಾಳಿಯಲ್ಲಿ ಶಿವಮೊಗ್ಗದ ಮಂಜುನಾಥ್ ಮತ್ತು ಬೆಂಗಳೂರಿನ ಭರತ್ ಭೂಷಣ್ ಹತ್ಯೆಯಾಗಿದ್ದು, ಅವರ ಕುಟುಂಬ, ಜಾತಿ, ಅಂತಸ್ತು ಕೇಳಿ ಭಯೋತ್ಪಾದಕರು ದಾಳಿ ಮಾಡಿಲ್ಲ. ಹಿಂದು ಎಂಬ ಕಾರಣಕ್ಕೆ ಹತ್ಯೆ ಮಾಡಿದ್ದಾರೆ. ಅವರ ಜತೆ ನಿಲ್ಲಬೇಕಾದ್ದು ಇಡೀ ಹಿಂದು ಧರ್ಮದವರ ಕರ್ತವ್ಯ ಎಂದಿದ್ದಾರೆ.