ರಾಮಕೃಷ್ಣ ಮಠದಿಂದ ಮಕ್ಕಳಿಗಾಗಿ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

ಹೊಸದಿಗಂತ ವರದಿ ತುಮಕೂರು: 

ಪಾವಗಡದಲ್ಲಿರುವ ಶ್ರೀ ರಾಮಕೃಷ್ಣ ಆಶ್ರಮದ‌‌‌‌ ಶ್ರೀ ಶಾರದಾ ದೇವಿ ಕಣ್ಣಿನ ಆಸ್ಪತ್ರೆಯು ಇನ್ಫೋಸಿಸ್ ‌ಫೌಂಡೇಶನ್‌‌‍ ಸಹಕಾರದೊಂದಿಗೆ ‌ಏಪ್ರಿಲ್ 25ರಂದು ಮಕ್ಕಳಿಗಾಗಿ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಂಡಿರುವುದಾಗಿ ಆಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದರು‌‌ ತಿಳಿದ್ದಾರೆ.

ನೇತ್ರ ತಜ್ಞರಾದ ಡಾ.ವಸುಧಾ ನರೇಶ್ ಅವರು ಮಕ್ಕಳ ನೇತ್ರ ಪರೀಕ್ಷೆ ಮಾಡುವರು. ದೃಷ್ಟಿ ದೋಷ, ಸದಾ ತಲೆನೋವು,  ಕಣ್ಣು ಕೆಂಪಾಗುವುದು, ಕಣ್ಣು ಉಜ್ಜುವುದು, ರಾತ್ರಿ ಕಣ್ಣು ಕಾಣದಿರುವುದು, ಕಣ್ಣಿನಲ್ಲಿ ಸದಾ ಪಿಸಿರು ಮತ್ತು ನೀರು ಬರುವುದು, ಮೆಳ್ಳಗಣ್ಣು ಮುಂತಾದ ಕಣ್ಣಿನ ದೋಷವಿರುವ ಮಕ್ಕಳ ಪೋಷಕರು ಈ ಶಿಬಿರದ ಪ್ರಯೋಜನ ಪಡೆಯಬಹುದು ಎಂದು ಸ್ವಾಮಿ ಜಪಾನಂದರು ತಿಳಿಸಿದ್ದಾರೆ. ಶಿಬಿರವು 25ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 3.30ರವರೆಗೆ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!