ಸೇತುವೆಯಿಂದ ಹಳ್ಳಕ್ಕೆ ಬಿದ್ದ ಮುಂಬೈನಿಂದ ಕ್ಯಾಲಿಕಟ್ ಗೆ ತೆರಳುತ್ತಿದ್ದ ಲಾರಿ: ವಸ್ತುಗಳು ಚೆಲ್ಲಾಪಿಲ್ಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮುಂಬೈನಿಂದ ಕ್ಯಾಲಿಕಟ್ ಗೆ ಗೃಹೋಪಯೋಗಿ ಗಾಜಿನ ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ತುಂಬಿ ಸಾಗುತ್ತಿದ್ದ ಲಾರಿ ಬೆಳಸೆ ಚಂದುಮಠ ಬಳಿ ಸೇತುವೆಯಿಂದ ಹಳ್ಳಕ್ಕೆ ಬಿದ್ದು ಇಬ್ಬರು ಗಾಯಗೊಂಡ ಘಟನೆ ಸೋಮವಾರ ಸಂಜೆ ನಡೆದಿದೆ.
ಲಾರಿಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಹಳ್ಳದಲ್ಲಿ ಬಿದ್ದಿದ್ದು ಲಾರಿ ಚಾಲಕ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ.
ಬೆಳಸೆ ಚಂದುಮಠ ಭಾಗದಲ್ಲಿ ಚತುಷ್ಪತ ಹೆದ್ದಾರಿ ಇದುವರೆಗೆ ನಿರ್ಮಾಣ ಆಗದ ಕಾರಣ ಅಪಘಾತಗಳು ಹೆಚ್ಚುತ್ತಿವೆ ಎಂಬ ಆರೋಪಗಳು ಸ್ಥಳೀಯರಿಂದ ಕೇಳಿ ಬಂದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!