ದಿನಭವಿಷ್ಯ: ನೆಮ್ಮದಿಯ ಜೀವನಕ್ಕೆ ಹೊಂದಾಣಿಕೆ ಅವಶ್ಯ, ಜಿಗುಟುತನ ಬಿಡಿ

ಮೇಷ
ಹಲವು ವಿಷಯಗಳ ಬಗ್ಗೆ ಚಿಂತೆ. ಗೊಂದಲದ ಮನಸ್ಥಿತಿ. ಸಮಸ್ಯೆ ಪರಿಹಾರ ಆಗುತ್ತಿಲ್ಲವೆಂಬ ಹತಾಶೆ. ಸಮಾಧಾನ, ಸಹನೆ ಅತ್ಯವಶ್ಯ.

ವೃಷಭ
ಈ ದಿನ ನೆಮ್ಮದಿಯಿಂದ ಕಳೆಯಬೇಕಾದರೆ ನೀವು ಖಾಸಗಿ ಮತ್ತು ವೃತ್ತಿ ಬದುಕಲ್ಲಿ ಕೆಲವು ಹೊಂದಾಣಿಕೆ ಮಾಡಿಕೊಳ್ಳಬೇಕು. ಜಿಗುಟುತನ ಬಿಡಿ.

ಮಿಥುನ
ಮನೆಯಲ್ಲಿನ ಕೆಲವು ಬೆಳವಣಿಗೆ ಚಿಂತೆಗೆ ಕಾರಣವಾಗುವುದು. ಹಿರಿಯರಿಗೆ ಅನಾರೋಗ್ಯ. ಸಂಗಾತಿ ಜತೆಗೆ ಭಿನ್ನಮತ. ಸಹನೆ ಕಾಯ್ದುಕೊಳ್ಳಿ.

ಕಟಕ
ದಿನವಿಡೀ ಒತ್ತಡ. ಬಿಡುವಿಲ್ಲದ ಕಾರ್ಯ. ನೆರವಿನ ಹಸ್ತ ಸಿಗದು. ಎಲ್ಲವನ್ನೂ ನೀವೇ ನಿಭಾಯಿಸಬೇಕು. ಬಂಧುಗಳಿಂದ ಶುಭ ಸುದ್ದಿ ಸಿಕ್ಕೀತು.

ಸಿಂಹ
ಒತ್ತಡದ ದಿನ. ಸಹನೆ, ಧೈರ್ಯದಿಂದ ಅದನ್ನು ನಿಭಾಯಿಸಬೇಕು. ಇತರರ ಮಾತು ಕೇಳಿ ತಪ್ಪು ನಿರ್ಧಾರ ತಾಳಬೇಡಿ. ಕೌಟುಂಬಿಕ ಅಸಮಾಧಾನ.

ತುಲಾ
ಕ್ಲಿಷ್ಟಕರ ಪರಿಸ್ಥಿತಿ ಎದುರಿಸಲು ಸಿದ್ಧರಾಗಿರಿ. ದೈನಂದಿನ ಜಂಜಡಗಳಿಂದ ರೋಸುವಿರಿ. ಧ್ಯಾನ, ಪ್ರಾರ್ಥನೆ ನಿಮಗೆ ನೆರವಾಗಬಹುದು.

ವೃಶ್ಚಿಕ
ವೃತ್ತಿಯಲ್ಲಿನ ಒತ್ತಡ ಇಂದು ಕಡಿಮೆ ಆಗುವುದು. ಹಾಗಾಗಿ ನೀವಿಂದು ನಿರಾಳತೆ ಅನುಭವಿಸುವಿರಿ. ದೈಹಿಕ ಕ್ಷಮತೆ ಉಳಿಸಿಕೊಳ್ಳಲು ಗಮನ ಕೊಡಿ.

ಧನು
ನಿಮ್ಮ ಪಾಲಿಗೆ ಇಂದು ಸಾಧಾರಣ ದಿನ. ದೊಡ್ಡ ಯಶಸ್ಸು ಕಾಣಲಾರಿರಿ. ಹಾಗೆಂದು ಸೋಲೂ ಇಲ್ಲ. ಸಂತೋಷ ಮತ್ತು ಬೇಸರ ಎರಡೂ ನಿಮ್ಮ ಪಾಲಿಗಿದೆ.

ಮಕರ
ಕೆಲದಿನಗಳ ಒತ್ತಡ ನಿವಾರಣೆ. ಆರ್ಥಿಕ ಲಾಭದ ಸೂಚನೆಗಳಿವೆ. ಬಂಧುಗಳಿಂದ ಕಿರಿಕಿರಿ. ಅವರನ್ನು ಸರಿಯಾಗಿ ನಿಭಾಯಿಸಿ. ಸಂಘರ್ಷ ತಪ್ಪಿಸಿರಿ.

ಕುಂಭ
ನಿಮಗೆ ಪೂರಕವಾದ ಮಹತ್ವದ ಮಾಹಿತಿ ನಿಮಗಿಂದು ಸಿಗಲಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಿ. ಸಹೋದ್ಯೋಗಿ ಜತೆ ಸಂಘರ್ಷ ಸಂಭವ.

ಮೀನ
ಖರ್ಚು ಕಡಿಮೆ ಮಾಡಿ ಉಳಿತಾಯಕ್ಕೆ ಹೆಚ್ಚು ಗಮನ ಕೊಡಲು ಸಕಾಲ. ಅನವಶ್ಯ ವಸ್ತು ಖರೀದಿಯ ಹುಮ್ಮಸ್ಸು ನಿಯಂತ್ರಿಸಿ. ಕೌಟುಂಬಿಕ ಸಮಾಧಾನ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!