ದಿನಭವಿಷ್ಯ: ಕಾರ್ಯರಂಗದಲ್ಲಿ ಮುನ್ನಡೆ, ಆಪ್ತವರ್ಗದಿಂದ ಸಕಾಲಿಕ ನೆರವು

ಮೇಷ
ಕುಟುಂಬ ಸದಸ್ಯರ  ಬೇಡಿಕೆ ಈಡೇರಿಸಲು ಆದ್ಯತೆ ಕೊಡಿ. ಅವರನ್ನು ನಿರ್ಲಕ್ಷಿಸುತ್ತಿದ್ದೀರಿ ಎಂಬ ಭಾವನೆ ಬರದಿರಲಿ. ಆಪ್ತರ ಜತೆಗಿನ ಮುನಿಸು ಶಮನ.

ವೃಷಭ
ನಿಮ್ಮ ಆರ್ಥಿಕ ಸ್ಥಿತಿಯ ಕುರಿತು ಚಿಂತೆ ಅನವಶ್ಯ. ಹಣದ ಮುಗ್ಗಟ್ಟು ಪರಿಹಾರ ಕಾಣುವುದು.
ಕೌಟುಂಬಿಕ ಪರಿಸರದಲ್ಲಿ ಸಂತೋಷ ಕಾಣುವಿರಿ.

ಮಿಥುನ
ನಿಮ್ಮನ್ನು ದೂರ ಮಾಡಿದವರು ಸಮೀಪವಾಗುತ್ತಾರೆ. ಭಿನ್ನಾಭಿಪ್ರಾಯ ಶಮನ.  ವೃತ್ತಿಯಲ್ಲಿ ಪೂರಕ ಬೆಳವಣಿಗೆ. ಆರ್ಥಿಕ ಉನ್ನತಿ.

ಕಟಕ
ನಿಮ್ಮ ಜೀವನಶೈಲಿ  ಬದಲಿಸಬೇಕಾದ ಅಗತ್ಯ ಉಂಟಾದೀತು.  ಅದರಿಂದ ಕೆಲವು ಸಮಸ್ಯೆ ಪರಿಹಾರ. ಎಲ್ಲರೂ ನಿಮ್ಮನ್ನು ಆದರಿಸುವರು.

ಸಿಂಹ
ಅತ್ಯಾಪ್ತರು ನಿಮ್ಮೊಡನೆ ಮುನಿಸಿಕೊಳ್ಳುವರು. ಹೊಂದಾಣಿಕೆ, ಸಾಂತ್ವನ ಮುಖ್ಯವೇ ಹೊರತು ಸಂಘರ್ಷವಲ್ಲ. ಮಾತಿಗೆ ಮಾತು ಬೆಳೆಸಲು ಹೋಗದಿರಿ.

ಕನ್ಯಾ
ಉಲ್ಲಾಸದ ವಾತಾವರಣ. ಕುಟುಂಬಸ್ಥರ ಬೆಂಬಲ, ಸಹಕಾರ. ಆತ್ಮೀಯ ವ್ಯಕ್ತಿಯೋರ್ವರ ಸಂಪರ್ಕ ಹೆಚ್ಚು ಕುಶಿ ನೀಡುತ್ತದೆ. ಒಟ್ಟಿನಲ್ಲಿ ಸಂತೋಷದ ದಿನ.

ತುಲಾ
ಹೊಸ  ವ್ಯವಹಾರ ಆರಂಭಿಸುವ ಯೋಜನೆಯಿದ್ದರೆ ಅದಕ್ಕೆ ಪೂರಕ ಪರಿಸ್ಥಿತಿ ಮೂಡಲಿದೆ. ಬಂಧುಗಳ ಸಹಕಾರ ಪಡೆಯುವಿರಿ. ಆರ್ಥಿಕ ಸುಸ್ಥಿತಿ.

ವೃಶ್ಚಿಕ
ವೃತ್ತಿಯಲ್ಲಿ ಹೆಚ್ಚು ಹೊಣೆಗಾರಿಕೆ.  ಒತ್ತಡ ಹೆಚ್ಚು. ಅದನ್ನು ಸಮರ್ಥವಾಗಿ ನಿಭಾಯಿಸಿ ಮೆಚ್ಚುಗೆ ಗಳಿಸುವಿರಿ. ಕೌಟುಂಬಿಕ ನೆಮ್ಮದಿ.

ಧನು
ಸುಸಂಘಟಿತವಾಗಿ ಕಾರ್ಯ ನಿರ್ವಹಿಸಿ. ಗೊಂದಲ ಮಾಡಿಕೊಂಡು ಕೆಲಸ ಕೆಡಿಸದಿರಿ. ಇತರರ ಸಹಕಾರ ಪಡೆಯಲು ಹಿಂಜರಿಕೆ ಬೇಡ.

ಮಕರ
ಜೀವನಶೈಲಿಯಲ್ಲಿ  ತುಸು ಬದಲಾವಣೆ ಅವಶ್ಯ. ಅದರಿಂದ ನಿಮಗೆ ಒಳಿತಾಗಲಿದೆ. ಸಣ್ಣ ವಿಷಯಕ್ಕೆ ಅತಿಯಾದ ಪ್ರತಿಕ್ರಿಯೆ ತೋರಬೇಡಿ.

ಕುಂಭ
ಕೌಟುಂಬಿಕ ಮುನಿಸು ತೊಡೆಯಲು ಆದ್ಯತೆ ಕೊಡಿ. ನೀವೇ ತುಸು ತ್ಯಾಗ ಮಾಡುವುದು ಒಳ್ಳೆಯದು. ಕೆಲವರ ಚಾಡಿ ಮಾತು ಕೇಳಿ ಕೆಡಬೇಡಿ.

ಮೀನ
ಆರೋಗ್ಯಕ್ಕೆ ಹೆಚ್ಚು ಗಮನ ಕೊಡಿ. ಮಾನಸಿಕ ಆರೋಗ್ಯ ಕೂಡ ಮುಖ್ಯ ಎಂದು ಅರಿಯಿರಿ. ಸಣ್ಣ ವಿಷಯಗಳಿಗೆ ಚಿಂತೆ ಮಾಡಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!