ದಿನಭವಿಷ್ಯ: ಆಪ್ತರಿಂದ ನಿರೀಕ್ಷಿತ ಸಹಾಯ, ಸಕಾಲದಲ್ಲಿ ನೆಮ್ಮದಿ

ಮೇಷ
ಕಾರ್ಯವೊಂದರ  ಬಗ್ಗೆ ನಿಮ್ಮಲ್ಲಿ ಗೊಂದಲ ಮೂಡಲಿದೆ.  ಯಾವ ರೀತಿ ಮುಂದುವರಿಯಬೇಕು ಎಂದು ಅರಿಯದೆ ಡೋಲಾಯಮಾನ.

ವೃಷಭ
ಕರ್ತವ್ಯಕ್ಕೇ ಗಮನ ಕೊಡುವುದು ಸರಿ. ಆದರೆ ಪ್ರೀತಿಪಾತ್ರರನ್ನು ಕಡೆಗಣಿಸಬೇಡಿ. ಅವರ ಇಷ್ಟಗಳಿಗೂ ಗಮನ ಕೊಡಿ. ಕೌಟುಂಬಿಕ ನೆಮ್ಮದಿಯೂ ಮುಖ್ಯ.

ಮಿಥುನ
ಮನಸ್ಸು ಗೊಂದಲದ ಗೂಡು. ಹಾಗಾಗಿ ಸ್ಪಷ್ಟ ಚಿಂತನೆ ನಿಮ್ಮಲ್ಲಿ ಮೂಡಲಾರದು. ಅನಿಶ್ಚಿತ ನಿರ್ಧಾರ ನಿಮಗೆ ಹಿನ್ನಡೆ ತರಬಹುದು.

ಕಟಕ
ನೆಗೆಟಿವ್ ಚಿಂತನೆ ದೂರ ಮಾಡಿ. ಕೆಲಸವು ಸಾಧ್ಯವಾಗುವುದೆಂಬ ವಿಶ್ವಾಸ ಮುಖ್ಯ. ಕೌಟುಂಬಿಕ ಸಹಕಾರ ನಿಮ್ಮ ನೆರವಿಗೆ ಬರುವುದು.

ಸಿಂಹ
ನಿಮ್ಮ ಕಾರ್ಯ ಸಾಧಿಸಲು ಅಡ್ಡದಾರಿ ಹಿಡಿಯುವ ಪ್ರೇರೇಪಣೆ ಉಂಟಾದೀತು. ಅದಕ್ಕೆ ಕೈಹಾಕದಿರಿ. ಪ್ರಬುದ್ಧವಾಗಿ ಚಿಂತಿಸಿ ಹಾಗೂ ವರ್ತಿಸಿ.

ಕನ್ಯಾ
ನಿಮ್ಮ ಒಳ್ಳೆತನವನ್ನು ಕೆಲವರು ದುರ್ಬಳಕೆ ಮಾಡಿಕೊಂಡಾರು. ಅದಕ್ಕೆ ಅವಕಾಶ ಕೊಡದಿರಿ. ಕಠಿಣ ನಿಲುವು ತಾಳಲು ಹಿಂಜರಿಕೆ ತೋರದಿರಿ.

ತುಲಾ
ಭಾವುಕರಾಗಿ ತಪ್ಪು ನಿರ್ಧಾರ ತಾಳದಿರಿ. ಕೆಲವೊಮ್ಮೆ ಭಾವನೆ ಬದಿಗಿಟ್ಟು ಚಿಂತಿಸಬೇಕು. ಇತರರಿಗೆ ನೋವಾದೀತೆಂದು ಕೊರಗದಿರಿ.

ವೃಶ್ಚಿಕ
ಸಂಘರ್ಷ ತಪ್ಪಿಸಲು ನಿಮ್ಮ ಆದ್ಯತೆ. ಆದರೆ ಇದರಿಂದ ಮನಶ್ಯಾಂತಿ ಸಿಗಲಾರದು.  ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸಿ. ಕಠಿಣ ನಿಲುವು ಅವಶ್ಯ.

ಧನು
ಏನೋ ಕಾರ್ಯ ಆಗಬೇಕಾಗಿದೆ. ಆದರೆ ಅದಕ್ಕೆ ಪ್ರಯತ್ನ ಪಡದೆ ಸುಮ್ಮನಿದ್ದೀರಿ. ಇನ್ನಾದರೂ ಜಡತ್ವ ಬಿಟ್ಟು ಸಕ್ರಿಯವಾಗಿ ಕಾರ್ಯಾಚರಿಸಿ.

ಮಕರ
ದೊಡ್ಡ ಸಾಧನೆ ಮಾಡಲು ನೀವು ಸಮರ್ಥರು. ಆದರೆ ಪ್ರಯತ್ನವಿಲ್ಲದೆ ಅದು ಸಾಧ್ಯವಿಲ್ಲ. ಮನಸ್ಸಿನ ಯೋಜನೆ ಕಾರ್ಯಗತ ಮಾಡಿರಿ.

ಕುಂಭ
ಕರ್ತವ್ಯ ನಿಭಾವಣೆಗೆ ಭಾವನೆ ಅಡ್ಡಿ ಬರದಿರಲಿ. ನಿಮ್ಮ ಹೊಣೆಗಾರಿಕೆ ನಿಭಾಯಿಸುವಲ್ಲಿ ಯಾವುದೇ ಹಿಂಜರಿಕೆ ತೋರದಿರಿ. ಎಲ್ಲ ಸುಸೂತ್ರವಾಗಲಿದೆ.

ಮೀನ
ಹೆಚ್ಚು ಮಾತಾಡಿ ಕಡಿಮೆ ಕೆಲಸ ಮಾಡುವ ಜನರನ್ನು ನಿಮ್ಮ ಸಂಗದಿಂದ ದೂರವಿಡಿ. ನಿಮ್ಮ ಕಾರ್ಯದ ಮೇಲೆ ಪ್ರಭಾವ ಬೀರಲು ಅವಕಾಶ ಕೊಡದಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!