ದಿನಭವಿಷ್ಯ: ಬದುಕಿನಲ್ಲಿ ಗುಣಾತ್ಮಕ ಬದಲಾವಣೆ. ಆರ್ಥಿಕ ಪ್ರಗತಿ ತೃಪ್ತಿದಾಯಕ

ಮೇಷ
ಇತರರ ಜತೆ ಉತ್ತಮ ಸಂವಹನ ಸಾಧಿಸಲಾಗದೆ ಗೊಂದಲದ ಸ್ಥಿತಿಗೆ ಸಿಲುಕುವಿರಿ. ಮೊದಲಿಗೆ ಮನಸ್ಸಿನ ದ್ವಂದ್ವ ಕಳೆದುಕೊಳ್ಳಿ. ನಿಶ್ಚಿತ ನಿರ್ಧಾರ ತಾಳಿ.

ವೃಷಭ
ಹೆಚ್ಚಿನ ಚಟುವಟಿಕೆ ಇಲ್ಲದ ಉದಾಸ ದಿನ. ಕೆಲವು ವಿಷಯಗಳಲ್ಲಿ ಹೆಚ್ಚು ತಾಳ್ಮೆ ಪ್ರದರ್ಶಿಸಬೇಕು. ದೈಹಿಕ ಆಲಸ್ಯ, ಮೈಕೈ ನೋವು ಉಂಟಾದೀತು.

ಮಿಥುನ
ಬದುಕಿನಲ್ಲಿ ಗುಣಾತ್ಮಕ ಬದಲಾವಣೆ. ಆರ್ಥಿಕ ಪ್ರಗತಿ. ಉಳಿತಾಯ ಹೆಚ್ಚಳ. ನಿಮ್ಮ ಇಷ್ಟದ ವ್ಯಕ್ತಿಯನ್ನು ಭೇಟಿ ಆಗುವ ಅವಕಾಶ. ನಿಮಗೆ ಪೂರಕ ದಿನ.

ಕಟಕ
ಸಂಗಾತಿ ಜತೆಗೆ ಉತ್ತಮ ಹೊಂದಾಣಿಕೆ. ಹಾಗಾಗಿ ಮನೆಯಲ್ಲಿ ಸೌಹಾರ್ದ ಪರಿಸ್ಥಿತಿ. ಆರ್ಥಿಕ ಪ್ರಗತಿ ತೃಪ್ತಿದಾಯಕ. ಧನಲಾಭ. ಸಾಂಸಾರಿಕ ಸಹಕಾರ.

ಸಿಂಹ
ಆರಂಭದಲ್ಲಿ ಕೆಲವು ಸಂಕಷ್ಟಗಳನ್ನು ಎದುರಿಸಿದರೂ ಬಳಿಕ ಎಲ್ಲವೂ ಸರಿಯಾಗುವುದು. ನಿಮ್ಮ ಉದ್ದೇಶ ಈಡೇರುವುದು.

ಕನ್ಯಾ
ನಿರಾಳವಾಗಿ ಕೂತು ಮೊದಲಿಗೆ ಮನಸ್ಸಿನಲ್ಲಿ ಮಂಥನ ನಡೆಸಿ. ನಿಮ್ಮ ಕಾರ್ಯದ ತಪ್ಪುಒಪ್ಪುಗಳ ಪರಾಮರ್ಶೆ ನಡೆಸಿ. ಬಳಿಕ ಸೂಕ್ತ ನಿರ್ಧಾರ ತಾಳಿರಿ.

ತುಲಾ
ಆದಾಯ ಹೆಚ್ಚಿಸುವ ಪ್ರಯತ್ನ ನಡೆಸುವಿರಿ. ಆದರೆ ಯೋಜನೆ ಸರಿಯಾಗಿರಲಿ. ಇತರರ ಸಹಕಾರ ಸಿಗದಿದ್ದರೆ ವಿಫಲತೆ ಕಾಣುವಿರಿ. ಕೌಟುಂಬಿಕ ವಾಗ್ವಾದ.

ವೃಶ್ಚಿಕ
ಉದ್ಯೋಗದಲ್ಲಿ ಹೆಚ್ಚು ಹೊಣೆಗಾರಿಕೆ. ಹಣದ ನಿಭಾವಣೆಯಲ್ಲಿ ಹೆಚ್ಚು ಒತ್ತಡ ಅನುಭವಿಸುವಿರಿ. ಇತರರ ವದಂತಿಯ ಮಾತು ನಂಬಿ ಕೆಡದಿರಿ. ವಿವೇಚನೆಯಿರಲಿ.

ಧನು
ಬಾಕಿ ಇರುವ ಕಾರ್ಯ ಪೂರೈಸಲು ಆದ್ಯತೆ ಕೊಡಿ. ನೀವು ಬಯಸಿದ ವ್ಯಕ್ತಿ ನಿಮಗೆ ಹತ್ತಿರವಾಗುತ್ತಾರೆ. ಆತ್ಮೀಯ ಸಂಬಂಧ ಬೆಳೆಯಬಹುದು.

ಮಕರ
ವೃತ್ತಿಯಲ್ಲಿ ನಿಮಗೆ ಅನುಕೂಲಕರ ಬೆಳವಣಿಗೆ. ನಿಮ್ಮ ಅಭೀಷ್ಟ ಈಡೇರಿಕೆ. ಖಾಸಗಿ ಬದುಕಿನಲ್ಲೂ ನಿಮ್ಮ ಇಷ್ಟಾರ್ಥ ಪೂರೈಸುವುದು.

ಕುಂಭ
ವೃತ್ತಿ ಬದುಕಿನಲ್ಲಿ ಸಫಲತೆ. ನೀವು ಬಯಸಿದ ಉದ್ದೇಶ ಈಡೇರುವುದು. ನಿಮ್ಮ ಕುಟುಂಬಸ್ಥರ ಜತೆ ಹೆಚ್ಚು ಸಮಯ ಕಳೆಯಲು ಗಮನ ಕೊಡಿ.

ಮೀನ
ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಗಮನ ಕೊಡಿ. ಖರ್ಚು ಕಡಿಮೆ ಮಾಡುವುದೂ ಅದರಲ್ಲಿ ಒಂದು ದಾರಿ. ಕೌಟುಂಬಿಕ ಬಿಕ್ಕಟ್ಟು ನಿವಾರಣೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!