ದಿನಭವಿಷ್ಯ: ನಿಮಗೆ ನೀವೇ ಶತ್ರುಳಾಗುವಿರಿ, ತಪ್ಪು ಹೆಜ್ಜೆಗಳು ನಿಮ್ಮ‌ ದಿಕ್ಕನ್ನು ತಪ್ಪಿಸಬಹುದು

ಮೇಷ
ಮಾನಸಿಕ ಬೇಗುದಿ. ವಿವಿಧ ವಿಷಯ ಇದಕ್ಕೆ ಕಾರಣ. ಕಷ್ಟಕ್ಕೆ ಪರಿಹಾರ ಹುಡುಕಬೇಕೇ ಹೊರತು ತಲೆಕೆಡಿಸುತ್ತಾ ಕೂರಬಾರದು.
ವೃಷಭ
ಮಾನಸಿಕ ತಲ್ಲಣ. ಏಕಾಂತ ಬಯಸುವಿರಿ. ಅದರಿಂದ ಫಲವಿಲ್ಲ. ಎಲ್ಲರ ಜತೆ ಬೆರೆತು ವ್ಯವಹರಿಸಿದರೆ ಪರಿಹಾರ ದೊರಕಬಹುದು.
ಮಿಥುನ
ಸಮಾನಮನಸ್ಕ ವ್ಯಕ್ತಿಗಳ ಜತೆಗಿನ ಸಮಾಲೋಚನೆ  ಪ್ರಯೋಜನ ತರಲಿದೆ. ಕಾರ್ಯ ಸಫಲ. ಶೀತ, ಜ್ವರದಂತಹ ಅನಾರೋಗ್ಯ.
ಕಟಕ
ಅಹಿತಕರ ಪ್ರಸಂಗ ದಿಂದ ವಿಶ್ವಾಸ ಕುಂದಲಿದೆ. ಮಾಡಬೇಕಾದ ಕೆಲಸ  ಧೈರ್ಯದಿಂದ ಮಾಡಿ ಮುಗಿಸಿ. ಅನ್ಯರ ಮೇಲೆ ಅವಲಂಬನೆ ಬೇಡ.
ಸಿಂಹ
ಪ್ರತಿಯೊಂದು ಕೆಲಸ ಪರಿಪೂರ್ಣವಾಗಿ ಮಾಡಲು ಆದ್ಯತೆ ಕೊಡಿ. ಅರೆಬರೆ ಕೆಲಸ ಮುಂದಕ್ಕೆ ಕಿರಿಕಿರಿ ಸೃಷ್ಟಿಸಬಹುದು. ಸಾಲ ನೀಡದಿರಿ.
ಕನ್ಯಾ
ವ್ಯವಹಾರದಲ್ಲಿ ಮನಸ್ಸಾಕ್ಷಿಯಂತೆ ನಡಕೊಳ್ಳಿ. ಇತರರ ಸಲಹೆಗೆ ಕಾಯದಿರಿ. ನಿಮಗೆ ಒಳಿತಾಗಲಿದೆ.  ಹೊಂದಾಣಿಕೆ ಒಳಿತು.
ತುಲಾ
ಇತರರ ಜತೆ ವ್ಯವಹರಿಸುವಾಗ ಆಕ್ರಮಣಕಾರಿ ಧೋರಣೆ ಬಿಡಿ. ಅದರಿಂದ ಕಾರ್ಯ ಸಾಧಿಸದು. ನಯವಿನಯ ಒಳಿತು.
ವೃಶ್ಚಿಕ
ಸಾಂಸಾರಿಕ ಬದುಕು ನೆಮ್ಮದಿದಾಯಕ. ಕೆಲವರ ಚಾಡಿಮಾತುಗಳಿಗೆ ಕಿವಿಕೊಡದಿರಿ. ಉದ್ಯೋಗದಲ್ಲಿ  ನಿಮ್ಮ ಆಶಯ ಈಡೇರಿಕೆ.
ಧನು
ಯಾವುದೋ ಚಿಂತೆ ಕಾಡುತ್ತದೆ. ದೊಡ್ಡ ವಿಷಯವಲ್ಲದಿದ್ದರೂ ಮನದಲ್ಲಿ ಅಸಮಾಧಾನ. ನೀವಾಗಿ ಸೃಷ್ಟಿಸಿಕೊಂಡ ಸಮಸ್ಯೆಗಳಿವು.
ಮಕರ
ಬಿಡುವಿಲ್ಲದ ದಿನ. ಹಾಗಾಗಿ ನಿಮ್ಮ ಪೂರ್ವನಿರ್ಧರಿತ ಕೆಲಸ ಪೂರ್ಣಗೊಳ್ಳದು. ಅಶಾಂತ ವಾತಾವರಣ ತಿಳಿಯಾಗಲಿದೆ.
ಕುಂಭ
ಬಂಧುಗಳ ಜತೆ ವ್ಯವಹರಿಸುವಾಗ ವಿವೇಕದಿಂದ ವರ್ತಿಸಿ. ನಿಮ್ಮ ನಡೆನುಡಿ ಅವರಿಗೆ ನೋವು ತರದಂತೆ  ನೋಡಿಕೊಳ್ಳಿ.
ಮೀನ
ಕೌಟುಂಬಿಕ ಪರಿಸರ ಸೌಹಾರ್ದದಾಯಕ. ಮನೆಯವರ ಜತೆ ಆತ್ಮೀಯ ಕಾಲಕ್ಷೇಪ. ವೃತ್ತಿಯಲ್ಲಿ  ಅನುಕೂಲ. ಧನಾಗಮ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!