ಹೊಸದಿಗಂತ ವರದಿ ಕೊಪ್ಪಳ:
ಶ್ರೀ ಸಿದ್ದೇಶ್ವರ ಶ್ರೀಗಳ ಅಗಲಿಕೆ ಕುರಿತು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಪಂಥಗಳಿಲ್ಲದ, ಗ್ರಂಥಕ್ಕೆ ಅಂಟಿಕೊಳ್ಳದ, ಜನರ ಹೃದಯ ಗ್ರಂಥಗಳಲ್ಲಿ ಉಳಿದ, ಸಂತ ವಸಂತ ಸಿದ್ದೇಶ್ವರ ಅಪ್ಪಾಜಿಯವರು.
ನಿಂತ ನಿಲುವು ಸದಾ ಸತ್ಯದ ಒಲವು, ಮಾಯ ಮುಟ್ಟದ ಕಾಯ, ಭ್ರಮೆ ಇಲ್ಲದ ಭಾವ. ಲೋಕಾಂತವನ್ನು ಪ್ರೀತಿಸಿ, ತಾವು ಏಕಾಂತವಾಗಿ ಉಳಿದವರು. ಚಿಂತೆಗಳ ಮಧ್ಯೆ ನಿಶ್ಚಿಂತನಾಗಿ ಬದುಕುವ ಜೀವನ್ಮುಕ್ತಾವಸ್ತರು ಹೇಳಿದರು.