ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ನಿಂತರು ಗೀತಾ ಗೆಲ್ಲಲ್ಲ: ಕುಮಾರ್ ಬಂಗಾರಪ್ಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 
 
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಶಿವಮೊಗ್ಗ ಜಿಲ್ಲೆಯಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಯನ್ನೂ ಗೆಲ್ಲುವುದಿಲ್ಲ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಭವಿಷ್ಯ ನುಡಿದಿದ್ದಾರೆ.

ಜಿಲ್ಲಾ ಬಿಜೆಪಿ ವತಿಯಿಂದ ನಗರದ ಪೆಸಿಟ್ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವೃತ್ತಿಪರರ ಸಮಾವೇಶದಲ್ಲಿ ಮಾತನಾಡಿ, ನಮ್ಮ ತಂಗಿ, ನನ್ನ ತಮ್ಮ , ಜಾತಿ ಅಂತಾದರೆ ಪುಟಗಟ್ಟಲೆ ಮಾತನಾಡಬಹುದು. ಸಮಾಜದ ಓಟ್ ಎಲ್ಲಾ ಒಂದೇ ಕಡೆ ಹೋಗುತ್ತವೆ ಎಂಬುದು ಸತ್ಯಕ್ಕೆ ದೂರವಾದ ಮಾತುಗಳು. ಜಿಲ್ಲೆಯಲ್ಲಿ ಈಡಿಗರ ಭವನ ಕೊಟ್ಟಿದ್ದು ಯಡಿಯೂರಪ್ಪ. ಶಿಕಾರಿಪುರ, ಸೊರಬ ಎರಡು ಕಣ್ಣು ಅಂತ ಕೆಲಸ ಮಾಡಿದ್ದು ಯಡಿಯೂರಪ್ಪ ಎಂದರು.

ಫಿಲ್ಮ್ ಇಂಡಸ್ಟ್ರಿ ಇಲ್ಲ
ಫಿಲಂ ಇಂಡಸ್ಟ್ರಿಯೇ ನಮ್ಮ ಪರವಾಗಿದೆ ಎಂದು ಒಬ್ಬರು ಹೇಳಿದ್ದಾರೆ. ನಾನೂ ಒಬ್ಬ ನಿರ್ಮಾಪಕ. ನಮ್ಮದೂ ಸ್ಟುಡಿಯೋ ಇದೆ. ಮುನಿರತ್ನ ಇದಾರೆ, ರಾಕ್‌ಲೈನ್ ವೆಂಕಟೇಶ್ ಇದ್ದಾರೆ. ಹಾಗಾಗಿ ಇಡೀ ಫಿಲಂ ಇಂಡಸ್ಟ್ರಿ  ಹಿಂದೆ ಇದೆ ಎಂಬುದು ಸುಳ್ಳು. ಅವರ ಅಹಂಕಾರಕ್ಕೆ ಮದ್ದು ಕೊಡಲು ಬಿಜೆಪಿಗೆ ವೋಟ್ ಹಾಕಿ ಎಂದು ಮನವಿ ಮಾಡಿದರು. ಲೋಕಸಭಾ ಚುನಾವಣೆ ಬಳಿಕ ರಾಜ್ಯದ ರಾಜಕಾರಣ ಅಲ್ಲೋಲ ಕಲ್ಲೋಲ ಆಗುವುದು ದೂರ ಇಲ್ಲ ಎಂದು ಇದೇ ವೇಳೆ ಭವಿಷ್ಯ ನುಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!