ಈಗಾಲೇ ಮದುವೆಯಾಗಿ ಇಲ್ಲವೇ ಯುಸಿಸಿ ನಂತರ ಜೈಲು ಶಿಕ್ಷೆ ಅನುಭವಿಸಿ: ಎಐಯುಡಿಎಫ್ ಮುಖ್ಯಸ್ಥರಿಗೆ ಹಿಮಂತ ಶರ್ಮಾ ಎಚ್ಚರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ (Badruddin Ajmal) ಅವರನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಧುಬ್ರಿ ಸಂಸದರೂ ಆಗಿರುವ ಅಜ್ಮಲ್ ಮತ್ತೆ ಮದುವೆಯಾಗಲು ಬಯಸಿದರೆ, ಚುನಾವಣೆಗೆ ಮುಂಚಿತವಾಗಿ ಮದುವೆಯಾಗಬೇಕು, ಇಲ್ಲವೇ ಬಂಧನವನ್ನು ಎದುರಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಇದಕ್ಕೆ ಕಾರಣ ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ (Uniform Civil Code)ಜಾರಿಯಾಗಲಿದ್ದು, ಬಹುಪತ್ನಿತ್ವ ಕಾನೂನು ಬಾಹಿರವಾಗಲಿದೆ ಎಂದು ಶರ್ಮಾ ಹೇಳಿದ್ದಾರೆ.

ಧುಬ್ರಿ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸುತ್ತಿರುವ ಅಜ್ಮಲ್ ಅವರು , ಕಾಂಗ್ರೆಸ್‌ನ ಜನರು ಮತ್ತು ರಕಿಬುಲ್ ಹುಸೇನ್ (ಅವರ ಕಾಂಗ್ರೆಸ್ ಎದುರಾಳಿ) ನನಗೆ ವಯಸ್ಸಾಗಿದೆ ಎಂದು ಹೇಳಿದರು. ಆದರೆ ನನಗೆ ಇನ್ನೂ ತುಂಬಾ ಶಕ್ತಿ ಇದೆ, ನಾನು ಮದುವೆಯಾಗುತ್ತೇನೆ. ಮುಖ್ಯಮಂತ್ರಿ ಬಯಸದಿದ್ದರೂ ನಾನು ಹಾಗೆ ಮಾಡಬಲ್ಲೆ, ಅದು ನನ್ನ ಶಕ್ತಿ ಅಷ್ಟೆ ಎಂದಿದ್ದರು.

ಅಜ್ಮಲ್ ಹೇಳಿಕೆಗೆ ತಿರುಗೇಟು ನೀಡಿದ ಅಸ್ಸಾಂ ಮುಖ್ಯಮಂತ್ರಿ, ಅವರು (ಬದ್ರುದ್ದೀನ್ ಅಜ್ಮಲ್) ಈಗಾಲೇ ಮದುವೆಯಾಗಬೇಕು, ಚುನಾವಣೆ ನಂತರ, ಅಸ್ಸಾಂನಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ಬರಲಿದೆ, ನಂತರ ಅವರು ಮದುವೆಯಾದರೆ, ಅವರನ್ನು ಬಂಧಿಸಲಾಗುವುದು ಎಂದಿದ್ದಾರೆ.

ಅಜ್ಮಲ್ ಈಗ ನಮ್ಮನ್ನು ಮದುವೆಗೆ ಆಹ್ವಾನಿಸಿದರೆ, ನಾವು ಕೂಡಾ ಹೋಗುತ್ತೇವೆ. ಏಕೆಂದರೆ ಅದು ಇಲ್ಲಿಯವರೆಗೆ ಕಾನೂನುಬಾಹಿರವಾಗಿಲ್ಲ. ನನಗೆ ತಿಳಿದಿರುವಂತೆ, ಅವರಿಗೆ ಒಬ್ಬ ಹೆಂಡತಿ ಇದ್ದಾಳೆ. ಅವರು ಇನ್ನೂ ಎರಡು ಅಥವಾ ಮೂರು ಮದುವೆಯಾಗಬಹುದು, ಆದರೆ ಚುನಾವಣೆಯ ನಂತರ ನಾವು ಬಹುಪತ್ನಿತ್ವವನ್ನು ನಿಲ್ಲಿಸುತ್ತೇವೆ. ಸಂಪೂರ್ಣ ಕರಡು ಸಿದ್ಧವಾಗಿದೆ ಎಂದು ಶರ್ಮಾ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!