ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧ ಘತ್ತರಗಿ ಭಾಗ್ಯವಂತಿ ದೇವಾಲಯದ ಹುಂಡಿಯಲ್ಲಿನ ಹಣ ಹಾಗೂ ದೇವರ ಆಭರಣಗಳನ್ನು ಕಳವು ಮಾಡಲಾಗಿದೆ.
ಭಾಗ್ಯವಂತಿ ದೇವಸ್ಥಾನದ ಚಿಕ್ಕ ಬಾಗಿಲನ್ನು ಮುರಿದ ದುಷ್ಕರ್ಮಿಗಳು ಗರ್ಭಗುಡಿಯ ಒಳಗೆ ಹೋಗಿದ್ದಾರೆ. ಹುಂಡಿಯನ್ನು ಹೊಡೆದು ಹಣ ದೋಚಿ, ದೇವರ ವಿಗ್ರಹದ ಮೇಲೆ ಇರುವ ಚಿನ್ನಾಭರಣ ಕಳುವು ಮಾಡಿ ಪರಾರಿಯಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.