ಪದವೀಧರರಿಗೆ ಹಣ ನೀಡುವ ಬದಲು ಉದ್ಯೋಗ ನೀಡಿ: ಸರಕಾರಕ್ಕೆ ವಾಟಾಳ್ ನಾಗರಾಜ್ ಸಲಹೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಕ್ಯ ಕಾಂಗ್ರೆಸ್ ಸರ್ಕಾರದ ಪದವೀಧರರಿಗೆಆರ್ಥಿಕ ನೆರವು ನೀಡುವ ಯುವನಿಧಿ ಯೋಜನೆ ಜಾರಿಗೆ ಸಿದ್ಧತೆ ನಡೆಸಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಪದವೀಧರರಿಗೆ ಹಣ ನೀಡುವ ಬದಲು ಉದ್ಯೋಗ ನೀಡಿ ಎಂದು ಸಲಹೆ ನೀಡಿದ್ದಾರೆ.

ರ್ಕಾರ ಪದವೀಧರರಿಗೆ ಹಣ ನೀಡುವ ಬದಲು ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ, ಪದವೀಧರರಿಗೆ ಉದ್ಯೋಗ ನೀಡಲಿ ಎಂದು ಆಗ್ರಹಿಸಿದರು.

ಹೋಟೆಲ್ ಗಳಲ್ಲಿ ಟೀ, ಕಾಫಿ, ದೋಸೆ, ತಿಂಡಿ ಬೆಲೆ 150 ರೂಪಾಯಿ ಆಗಿದೆ. ಹೀಗಿರುವಾಗ ಸರ್ಕಾರ ಕೊಡುವ ಹಣದಿಂದ ಅವರಿಗೆ ಟೀ, ಕಾಫಿ ಕುಡಿಯಲೂ ಯೋಚಿಸಬೇಕಾಗುತ್ತೆ. ಮೂರು ಸಾವಿರ, ಒಂದುವರೆ ಸಾವಿರ ನೀಡುವ ಮೂಲಕ ಪದವೀಧರರಿಗೆ ಅಗೌರವ ತೋರಿದಂತಾಗುತ್ತದೆ. ವರ್ಷಕ್ಕೆ ಎಷ್ಟು ಜನ ಪದವಿಧರರಾಗುತ್ತಿದ್ದಾರೆ ಎಂಬುದರ ಅರಿವಿದೆಯೇ? ಪದವೀಧರರ ಸಮಸ್ಯೆ ಆಲಿಸಲೆಂದೇ ಸರ್ಕಾರ ಓರ್ವ ಸಚಿವರನ್ನು ನೇಮಕ ಮಾಡಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!