July 9, 2026
Thursday, July 9, 2026
spot_img

ಹೊಸ ನಾಯಕನಿಗೂ ಟೈಮ್ ಕೊಡಿ: ಸೋಲಿನ ನಡುವೆಯೂ ಅಯ್ಯರ್ ಪರ ABD ಬ್ಯಾಟಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಟಿ20 ತಂಡದ ಹೊಸ ನಾಯಕ ಶ್ರೇಯಸ್ ಅಯ್ಯರ್ ಆರಂಭಿಕ ಸರಣಿಗಳಲ್ಲಿ ನಿರೀಕ್ಷಿತ ಫಲಿತಾಂಶ ತರುವಲ್ಲಿ ವಿಫಲರಾದರೂ, ಅವರ ನಾಯಕತ್ವವನ್ನು ಈಗಲೇ ಪ್ರಶ್ನಿಸುವುದು ಸರಿಯಲ್ಲ ಎಂದು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ.

‘ಅಯ್ಯರ್ ಉತ್ತಮ ನಾಯಕ’

ಐಪಿಎಲ್‌ನಲ್ಲಿ ಹಲವು ತಂಡಗಳನ್ನು ಯಶಸ್ವಿಯಾಗಿ ಮುನ್ನಡೆಸಿದ ಅನುಭವ ಅಯ್ಯರ್‌ಗಿದೆ. ಒತ್ತಡದ ಸಂದರ್ಭದಲ್ಲೂ ಶಾಂತವಾಗಿ ನಿರ್ಧಾರ ತೆಗೆದುಕೊಳ್ಳುವ ಗುಣ ಅವರ ದೊಡ್ಡ ಶಕ್ತಿ ಎಂದು ಎಬಿ ಡಿವಿಲಿಯರ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೆಲವೇ ಪಂದ್ಯಗಳಿಂದ ತೀರ್ಪು ಬೇಡ

ಹೊಸ ನಾಯಕನ ಸಾಮರ್ಥ್ಯವನ್ನು ಎರಡು ಅಥವಾ ಮೂರು ಪಂದ್ಯಗಳ ಫಲಿತಾಂಶದ ಆಧಾರದಲ್ಲಿ ಅಳೆಯುವುದು ನ್ಯಾಯಸಮ್ಮತವಲ್ಲ. ತಂಡದ ಮೇಲೆ ತಮ್ಮ ಛಾಪು ಮೂಡಿಸಲು ಅಯ್ಯರ್‌ಗೆ ಸಾಕಷ್ಟು ಸಮಯ ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:

ಮುಂದಿದೆ ದೊಡ್ಡ ಜವಾಬ್ದಾರಿ

ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಬಳಿಕ ತಂಡವನ್ನು ಮುನ್ನಡೆಸುತ್ತಿರುವ ಅಯ್ಯರ್ ಮುಂದೆ ದೊಡ್ಡ ಸವಾಲಿದೆ. ಮುಂಬರುವ ಪ್ರಮುಖ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ದೀರ್ಘಾವಧಿಯ ಅವಕಾಶ ನೀಡಬೇಕು ಎಂಬ ಅಭಿಪ್ರಾಯವನ್ನು ಹಲವು ಕ್ರಿಕೆಟ್ ತಜ್ಞರು ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !