ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುನೀತ್ ರಾಜ್ಕುಮಾರ್ ಜನ್ಮದಿನದ ಪ್ರಯುಕ್ತ ಅಪ್ಪು ಅಭಿಮಾನಿಗಳು ಪುನೀತ ಮಾಲೆ ಅಭಿಯಾನ ಆರಂಭಿಸಿದ್ದರು. ಇದಕ್ಕೆ ವಿಧಿ ವಿಧಾನಗಳನ್ನು ಅಭಿಮಾನಿಗಳು ಕಂಡುಕೊಂಡಿದ್ದು, ವ್ರತ ಆಚರಣೆ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಬಗ್ಗೆ ಒಳ್ಳೆ ಹುಡ್ಗ ಪ್ರಥಮ್ ಮಾತನಾಡಿದ್ದಾರೆ.
ದೇವರ ಮೇಲೆ ಭಕ್ತಿ ಇರಲಿ, ಕಲಾವಿದರ ಮೇಲೆ ಪ್ರೀತಿ ಇರಲಿ, ಶಬರಿಮಲೆಗೆ ಹೋಗೋದು ಅಯ್ಯಪ್ಪ ಸ್ವಾಮಿಗೆ ಶರಣಾಗೋಕೆ, ಇಲ್ಲಿ ಬಹಳಷ್ಟು ಶಿಸ್ತುಗಳನ್ನು ಪಾಲಿಸಿ ಶ್ರದ್ಧಾಭಕ್ತಿಯಿಂದ ಮಾಲೆ ಧಾರಣೆ ಮಾಡಲಾಗುತ್ತದೆ. ಕಲಾವಿದರನ್ನು ಕಲಾವಿದರಾಗೇ ಇರೋದಕ್ಕೆ ಬಿಡಿ, ಧಾರ್ಮಿಕ ನಂಬಿಕೆಗಳಲ್ಲಿ ಯಾರೂ ಅತಿರೇಕದದ ವರ್ತನೆ ತೋರಬಾರದು ಎಂದು ಪ್ರಥಮ್ ಹೇಳಿದ್ದಾರೆ.
ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ, ಪ್ರಥಮ್ ಹೇಳ್ತಿರೋದು ಸರಿಯಾಗಿದೆ ಎಂದು ಸಾಕಷ್ಟು ಮಂದಿ ಹೇಳಿದ್ದು, ಪುನೀತ್ ಅಭಿಮಾನಿಗಳು ಮಾತ್ರ ಗರಂ ಆಗಿದ್ದಾರೆ.
ದೇವರ ಮೇಲೆ ಭಕ್ತಿ ಇರಲಿ!ಕಲಾವಿದರ ಮೇಲೆ ಪ್ರೀತಿ,ಅಭಿಮಾನವಿರಲಿ…! #ಶಬರಿಮಲೆಗೆ ಹೋಗೋದು #ಅಯ್ಯಪ್ಪನಲ್ಲಿ ಶರಣಾಗೋಕೆ…!ಬಹಳ ಶಿಸ್ತುಗಳನ್ನ ಪಾಲಿಸಿ ಶ್ರದ್ಧಾಭಕ್ತಿಗಳಿಂದ ಮಾಲೆ ಧಾರಣೆ ಮಾಡಬೇಕು…!ಕಲಾವಿದರನ್ನ ಕಲಾವಿದರಾಗಿರೋಕೆ ಬಿಡಿ!
ಧಾರ್ಮಿಕ ನಂಬಿಕೆಗಳಲ್ಲಿ ಯಾರೂ ಅತೀರೇಕದ ವರ್ತನೆ ತೋರಬಾರದು!!
ದೇವರು-ದೇವರೇ…ಕಲಾವಿದರು-ಕಲಾವಿದರೇ!— Olle Hudga Pratham (@OPratham) February 23, 2023