ಕರಾಟೆ ಕ್ರೀಡಾ ಕೂಟದಲ್ಲಿ ಮಂಗಳೂರಿನ ಆದಿತ್ಯಗೆ ‘ಚಿನ್ನದ ಪದಕ’

ಹೊಸದಿಗಂತ ವರದಿ ಮಂಗಳೂರು:

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ, ಮಂಗಳೂರು ಉತ್ತರ ವಲಯದ ವತಿಯಿಂದ ತಾಲೂಕು ಮಟ್ಟದ ಪ್ರಾಥಮಿಕ / ಪ್ರೌಢ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ 2023-24 ಮುಲ್ಕಿಯ ಕಾರ್ನಾಡಿನ ಸಿ.ಯಸ್.ಐ.ಇ. ಶಾಲೆಯಲ್ಲಿ ಆಯೋಜಿಸಲಾಗಿದ್ದು, ಕರಾಟೆ ಕ್ರೀಡೆಯ 62-65 ಕೆ.ಜಿ. ವಿಭಾಗದಲ್ಲಿ ನಗರದ ಕೆನರಾ ಉರ್ವಾ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಕೆ .ಆದಿತ್ಯ ಶೆಣೈ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಆದಿತ್ಯ ನಗರದ ಖ್ಯಾತ ಕರಾಟೆ ತರಬೇತುದಾರ ಗಣೇಶ್ ಕೆ. ಅವರ ಶಿಷ್ಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!