ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಜ್ಯ ಸರ್ಕಾರ ಸ್ವಾಲಂಬಿ ಆಪ್ ಅನ್ನು ಜಾರಿಗೊಳಿಸುವ ರೈತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ನಾಗಕರೀಕರು ತಮ್ಮ ಸ್ವಂತ ಖಾಸಗಿ ಜಮೀನಿನ ನಕ್ಷೆಯನ್ನು ಸ್ವಯಂ ಸರ್ವೆ ಮಾಡಿ, ಸಿದ್ಧಪಡಿಸಿಕೊಳ್ಳುವಂತ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಈ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ನಡವಳಿ ಹೊರಡಿಸಿದ್ದು, ನಾಗರೀಕರು ತಮ್ಮ ಖಾಸಗೀ ಜಮೀನಿನ, ಮಂಜೂರಾಗಿ ದುರಸ್ತಾಗಿರುವ ಜಮೀನಿನ ಮಾಲೀಕತ್ವದ ಪಹಣಿ ಹೊಂದಿರುವ ಜಮೀನಿನಲ್ಲಿ 11ಇ, ಪೋಡಿ, ಭೂ ಪರಿವರ್ತನೆ ಪೂರ್ವ ಮತ್ತು ವಿಭಾಗ ಮಾಡಿಕೊಳ್ಳಲು ಸ್ವಾಲಂಬಿ ಆಪ್ ಮೂಲಕ ಸ್ವಯಂ ಸರ್ವೆ ಮಾಡಿ ಸ್ವಂತ ನಕ್ಷೆ ಸಿದ್ಧಪಡಿಸಿಕೊಳ್ಳುವಿಕೆ ವ್ಯವಸ್ಥೆಯನ್ನು ಜಾರಿಗೊಳಿಸಿದೆ.
ಇದರಿಂದ ನಾಗರೀಕರು ಇತರರ ಜಮೀನಿನ ಹಕ್ಕುಗಳಲ್ಲಿ ಮತ್ತು ಕಾನೂನಿನ ಒಟ್ಟಾರೆ ಅಗತ್ಯತೆಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ನಾಗರೀಕರು ತಮ್ಮ ಜಮೀನಿನಲ್ಲಿ ಯಾವುದೇ ರೀತಿಯ ವ್ಯವಹಾರ ಮಾಡಲು ಸ್ವತಂತ್ರನಾಗಿರುತ್ತಾನೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಕಾರ್ಯವಾಗಿದೆ.