ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಸೇವ್ ಸಾಯಿಲ್’ ಘೋಷವಾಕ್ಯದಲ್ಲಿ ಮಣ್ಣು ರಕ್ಷಣೆಗಾಗಿ ಈಶ ಫೌಂಡೇಷನ್ನ ಸದ್ಗುರು ಜಗ್ಗಿ ವಾಸುದೇವ ಅವರು ಜಾಗತಿಕ ಮಟ್ಟದಲ್ಲಿ ನಡೆಸುತ್ತಿರುವ ಅಭಿಯಾನವು ಸುರಿಯುತ್ತಿರುವ ಜಡಿಮಳೆಯನ್ನೂ ಲೆಕ್ಕಿಸದೆ ಮುಂದುವರಿದಿದೆ.
ಬೈಕ್ನಲ್ಲಿ ಸದ್ಗುರು ಏಕಾಂಗಿಯಾಗಿ ಈಗ ರೋಮ್ ಸಿಟಿಯತ್ತ ತೆರಳುತ್ತಿದ್ದು, ಈ ದಾರಿ ಮಧ್ಯೆ ಉತ್ತಮ ಮಳೆಯಾಗುತ್ತಿದೆ. ಇದ್ಯಾವುದನ್ನೂ ಲೆಕ್ಕಿಸದೆ ಅವರು ತಮ್ಮ ಅಭಿಯಾನ ಮುಂದುವರಿಸಿದ್ದಾರೆ.
ಯುಕೆ, ನೆದರ್ಲೆಂಡ್, ಜರ್ಮನಿ, ಜೆಕ್ ರಿಪಬ್ಲಿಕ್, ಆಸ್ಟ್ರಿಯಾ ಮತ್ತು ಸ್ಲೊವೇನಿಯಾ ಭೇಟಿಯ ನಂತರ ಮಾ.30ರಂದು ವೆನಿಸ್ ತಲುಪಿರುವ ಅವರಿಗೆ ಜನತೆ ಭಾರೀ ಸಂಖ್ಯೆಯಲ್ಲಿ ಬೆಂಬಲ ಘೋಷಿಸಿದ್ದಾರೆ. ಮಾ. 31ರಂದು ಸದ್ಗುರು ರೋಮ್ನತ್ತ ಪ್ರಯಾಣ ಆರಂಭಿಸಿದ್ದಾರೆ.