ಈ ಹಿಂದೆಯೂ ಎರಡು ಬ್ಯಾಗ್ ಸಿಕ್ಕಿತ್ತು: ಕೆಫೆ ಓನರ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಹಿಂದೆಯೂ ಎರಡು ಬ್ಯಾಗ್ ಸಿಕ್ಕಿತ್ತು. ನಾವು ಅದನ್ನು ಪೊಲೀಸರಿಗ ನೀಡಿದ್ದೆವು. ಈ ಬಾರಿ ಪೊಲೀಸರಿಗೆ ನೀಡುವ ಮುನ್ನವೇ ಸ್ಫೋಟ ಸಂಭವಿಸಿದೆ ಎಂದು ರಾಮೇಶ್ವರಂ ಕೆಫೆ ಸಹ ಸಂಸ್ಥಾಪಕಿ ದಿವ್ಯಾ ರಾವ್ ಹೇಳಿದ್ದಾರೆ.

ಈ ಹಿಂದೆ ಸಿಕ್ಕಿದ್ದ ಬ್ಯಾಗ್‌ಗಳನ್ನು ಗ್ರಾಹಕರು ಮರೆತು ಹೋಗಿದ್ದರು. ಅದರಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಇರಲಿಲ್ಲ. ಆದರೆ ಈ ಬಾರಿ ಯಾರೋ ತಿಂಡಿ ತಿಂದು ಬ್ಯಾಗ್ ಬಿಟ್ಟು ಹೋಗಿ ಸ್ಫೋಟವಾಗಿದೆ. ಗ್ರಾಹಕರು ಕೈ ತೊಳೆಯುವ ಸ್ಥಳದಲ್ಲಿ ಬಾಂಬ್ ಬ್ಲಾಸ್ಟ್ ಆಗಿದೆ. ಐಡಿ ಕಾರ್ಡ್ ಹಾಗೂ ಬ್ಯಾಟರಿ ದೊರೆತಿದೆ ಎಂದು ಪೊಲೀಸರು ಹೇಳಿದ್ದಾರೆ. ಹತ್ತು ಸೆಕೆಂಡ್ ಅಂತರದಲ್ಲಿ ಮತ್ತೆ ಬ್ಲಾಸ್ಟ್ ಆಗಿದೆ. ನಮ್ಮ ಸಿಬ್ಬಂದಿ ಹಾಗೂ ಗ್ರಾಹಕರು ಗಾಯಗೊಂಡಿದ್ದಾರೆ.

ನಾವು ಕಷ್ಟಪಟ್ಟು ಹೊಟೇಲ್ ನಡೆಸುತ್ತಿದ್ದೇವೆ, ನಮ್ಮನ್ನೇ ಯಾಕೆ ಟಾರ್ಗೆಟ್ ಮಾಡಿದ್ದಾರೆ ಗೊತ್ತಾಗುತ್ತಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!