ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ದೇಶಾದ್ಯಂತ ವಿದ್ಯಾರ್ಥಿಗಳೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಂವಾದ ನಡೆಸಿದ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮವನ್ನು ವಿವಿಧ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಭವನದಲ್ಲಿ ದೂರದರ್ಶನದ ನ್ಯಾಷನಲ್ ಲೈವ್ ಸ್ಟ್ರೀಮಿಂಗ್ ಮೂಲಕ ವೀಕ್ಷಣೆ ಮಾಡಿದರು.
ಕೆ.ಪಿ.ಎಸ್. ಶಾಲೆ ಮಲ್ಲೇಶ್ವರಂ, ಪೂರ್ಣ ಪ್ರಜ್ಞ ಎಜುಕೇಶನ್ ಸೆಂಟರ್, ಸ್ಟೆಲ್ಲಾ ಮೇರೀಸ್ ಪ್ರೌಢ ಶಾಲೆ, ಸರಕಾರಿ ಪ್ರೌಢಶಾಲೆ ಸಂತೇಬೀದಿ, ಯಶವಂತಪುರ, ಸರಕಾರಿ ಪ್ರೌಢಶಾಲೆ ಭಾರತೀಯ ವಿಜ್ಞಾನ ಮಂದಿರ, ನಿರ್ಮಲಾ ರಾಣಿ ಪ್ರೌಢ ಶಾಲೆ ಮಲ್ಲೇಶ್ವರಂ, ಸರ್ಕಾರಿ ಪ್ರೌಢಶಾಲೆ ಮಲ್ಲೇಶ್ವರಂ, ಹಿಮಾಂಶು ಕಲಾ ಜ್ಯೋತಿ ವಿದ್ಯಾಪೀಠ, ಎಂಎಲ್ಎ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶಿಕ್ಷಣಾ ಇಲಾಖೆ ಅಧಿಕಾರಿಗಳೂ ಉಪಸ್ಥಿತರಿದ್ದರು.