ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಲಿಕಾಪ್ಟರ್ನ ಹೊರಗೆ ಸೆಲ್ಫಿ ತೆಗೆಯಲು ಯತ್ನಿಸಿ ಸರ್ಕಾರಿ ಅಧಿಕಾರಿಯೊಬ್ಬರು ಪ್ರಾಣ ಕಳೆದುಕೊಂಡ ದಾರುಣ ಘಟನೆ ಉತ್ತರಾಖಂಡದ ಕೇದಾರನಾಥದಲ್ಲಿ ಭಾನುವಾರ ನಡೆದಿದೆ.
ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ ಹಣಕಾಸು ನಿಯಂತ್ರಕ ಜಿತೇಂದ್ರ ಕುಮಾರ್ ಸೈನಿ ಅವರು ಕೇದಾರನಾಥ ಧಾಮದ ಹೆಲಿಪ್ಯಾಡ್ನಲ್ಲಿ ನಡೆದ ಈ ದುರದೃಷ್ಟಕರ ದುರ್ಘಟನೆಗೆ ಬಲಿಯಾಗಿದ್ದಾರೆ.
ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುವಾಗ ಸೈನಿ ಹೆಲಿಕಾಪ್ಟರ್ನ ಟೈಲ್ ರೋಟರ್ ಬ್ಲೇಡ್ನ ಸಮೀಪಕ್ಕೆ ಬಂದಿದ್ದು, ಮಾರಣಾಂತಿಕ ಅಪಘಾತಕ್ಕೆ ಕಾರಣವಾಯಿತು.