ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಬಹಿರಂಗವಾದ ಸವಾಲ್ ಹಾಕಿದ್ದಾರೆ.
ರಾಜೀನಾಮೆ ಕೊಟ್ಟು ಸ್ಪರ್ಧೆ ಮಾಡಿನೋಡಿ, ನಂತರ ಮಾತನಾಡೋಣ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿ ಏನು ಕಡಿದು ಕಟ್ಟೆ ಹಾಕಿದ್ರು ಎಂದು ಸಿಎಂ ಹೇಳಿದ್ದಾರೆ, ನಾನೇನು ಮಾಡಿದ್ದೀನಿ ನೋಡೋಕೆ ನಮ್ಮ ಕ್ಷೇತ್ರಕ್ಕೆ ಬನ್ನಿ.
ನೀವು ವರುಣ ಕ್ಷೇತ್ರಕ್ಕೆ ರಾಜೀನಾಮೆ ಕೊಡಿ, ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ರಾಜೀನಾಮೆ ಕೊಡ್ತೀನಿ. ಇಬ್ಬರೂ ಚಾಮುಂಡೇಶ್ವರಿಯಲ್ಲಿ ಕಣಕ್ಕೆ ಇಳಿಯೋಣ ಯಾರು ಗೆಲ್ತಾರೆ ನೋಡೋಣ ಎಂದು ಸವಾಲ್ ಹಾಕಿದ್ದಾರೆ.
ಅಭಿವೃದ್ಧಿ ಮಾಡದೇ ಗೆಲ್ಲೋದು ಮುಖ್ಯ ಅಲ್ಲ, ಅಭಿವೃದ್ಧಿ ಮಾಡಿ ಜನರ ಮನಸ್ಸನ್ನು ಮೊದಲು ಗೆಲ್ಲಬೇಕು ಅದು ನಿಜವಾದ ಗೆಲುವು ಎಂದಿದ್ದಾರೆ.