ದಿಗಂತ ವರದಿ ಕಲಬುರಗಿ:
ಕನಾ೯ಟಕ ಕಾಯ೯ನಿರತ ಪತ್ರಕರ್ತರ ಸಂಘದ ವತಿಯಿಂದ ನಡೆಯುತ್ತಿರುವ 36ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಗುಡಿಹಳ್ಳಿ ನಾಗರಾಜ ಪ್ರಶಸ್ತಿ ಗೆ ಹೊಸ ದಿಗಂತ ಪತ್ರಿಕೆಯ ಸಮೂಹ ಸಂಪಾದಕರಾದ ಶ್ರೀ ವಿನಾಯಕ ಭಟ್ ಮೂರೂರು ಅವರು ಭಾಜನರಾದ ಸಂದರ್ಭದಲ್ಲಿ ಇಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ನಗರದ ಬಸವರಾಜಪ್ಪಾ ಅಪ್ಪಾ ಸ್ಮರಣಾರ್ಥ ಸಭಾಂಗಣದಲ್ಲಿ ಕೆಯುಡಬ್ಲೂಜೆ ವತಿಯಿಂದ ನಡೆಯುವ ವಾಷಿ೯ಕ ಪ್ರಶಸ್ತಿ ಪುರಸ್ಕೃತದಲ್ಲಿ ಶ್ರೀ ವಿನಾಯಕ ಭಟ್ ಮೂರೂರು ಒಬ್ಬರಾಗಿದ್ದು, ಗಣ್ಯವ್ಯಕ್ತಿಗಳಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ.