ರೈತರಲ್ಲಿ ಮೂಡಿದ ಆತಂಕ: ಗುಮ್ಮಟೆಗದ್ದೆ ಹೊಳೆ ಉಕ್ಕಿ ಹರಿದು ತೋಟಕ್ಕೆ ನುಗ್ಗಿದ ನೀರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನಿಡ್ಪಳ್ಳಿ: ಕರಾವಳಿ ಭಾಗದಲ್ಲಿ ಮಳೆಯ ಆರ್ಭಟ‌ ಜೋರಾಗಿದ್ದು, ಗುಮ್ಮಟೆಗದ್ದೆ ಹೊಳೆ ಉಕ್ಕಿ ಹರಿದು ತೋಟಕ್ಕೆ ನೀರು ನುಗ್ಗಿದ ಪರಿಣಾಮ ರೈತರಲ್ಲಿ ಆತಂಕ ಮನೆಮಾಡಿದೆ.

ಬೆಟ್ಟಂಪಾಡಿ ಗ್ರಾಮದ ಗುಮ್ಮಟೆಗದ್ದೆ ಎಂಬಲ್ಲಿ ಹರಿದು ಇರ್ದೆ ಗೌರಿ ಹೊಳೆಗೆ ಸೇರುವ ಹೊಳೆಯು ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಉಕ್ಕಿ ಹರಿದಿದೆ. ಅದರ ಪರಿಣಾಮ ಇಂದು ಹೊಳೆ ಬದಿಯ ಅಡಿಕೆ ತೋಟಗಳಿಗೆ ನೀರು ನುಗ್ಗಿದೆ.

ತೋಟಗಳಿಗೆ ನೀರು ನುಗ್ಗಿದ ಪರಿಣಾಮ ಕೃಷಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಮಳೆಯ ಅಬ್ಬರದಿಂದ ಕೃಷಿ ಚಟುವಟಿಕೆಗಳಿಗೂ ಹಾನಿಯುಂಟಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!