ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ಸಹಿತ ದೇಶದ ಹಲವೆಡೆಗಳಲ್ಲಿ ನಡೆದ ಪಿಎಫ್ಐ ಕಚೇರಿಗಳ ಮೇಲಿನ ಎನ್ಐಎ ದಾಳಿ ಖಂಡಿಸಿ ಕೇರಳದಲ್ಲಿ ಕರೆನೀಡಲಾಗಿರುವ ಹರತಾಳ ಹಿಂಸಾಚಾರದ ರೂಪ ಪಡೆದಿದೆ.
ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಸಂಸ್ಥೆಗೆ ಸೇರಿದ ಬಸ್ ಮೇಲೆ ಮಂಜೇಶ್ವರ ಪರಿಸರದಲ್ಲಿ ಕಲ್ಲು ತೂರಾಟ ನಡೆದಿದ್ದು, ಘಟನೆಯಲ್ಲಿ ಬಸ್ ಚಾಲಕ ಶಿಬು ಎಂಬವರು ಗಾಯಗೊಂಡಿದ್ದಾರೆ.
ಬಸ್ ಚಲಿಸುತ್ತಿದ್ದಾಗಲೇ ಬೈಕ್ನಲ್ಲಿ ಬಂದ ತಂಡವೊಂದು ಈ ಕೃತ್ಯ ನಡೆಸಿದೆ. ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.