ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಎಲೆಕ್ಷನ್ನಲ್ಲಿ ಕಡಿಮೆ ಸೀಟು ಬಂದಿದ್ದಕ್ಕೆ ಏನೇನೋ ಮಾತಾಡ್ತಿದ್ದಾರೆ. ಸೋಲನ್ನು ಮನಸ್ಸಿಗೆ ತೆಗೆದುಕೊಂಡಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಲೇವಡಿ ಮಾಡಿದ್ದಾರೆ.
ವರ್ಗಾವಣೆ ದಂಧೆ ಎನ್ನೋದೆಲ್ಲಾ ಸುಳ್ಳು, ಯಾವುದೇ ಆಧಾರ ಇಲ್ಲದೆ ಸಿಎಂ ಕಚೇರಿಲಿ 30 ಲಕ್ಷ ಪಡೆಯುತ್ತಾರೆ ಎಂದು ಹೇಳ್ತಿದ್ದಾರೆ. ಸೀಟು ಕಡಿಮೆ ಬಂದ ದುಃಖದಲ್ಲಿ ಏನೇನೋ ಮಾತಾಡ್ತಿದ್ದಾರೆ ಪಾಪ. ಇವರ ಬಗ್ಗೆ ಜಾಸ್ತಿ ತಲೆಕೊಡಿಸಿಕೊಳ್ಳೋದಿಲ್ಲ ಎಂದು ಹೇಳಿದ್ದಾರೆ.