ಕೆಲವೇ ಕ್ಷಣದಲ್ಲಿ ಯಮದೂತರಾಗಲಿದ್ದಾರೆ ಎಂದು ಅರಿಯದೆ ಅವರಲ್ಲಿ ಮುಗುಳ್ನಕ್ಕಿದ್ದರು…

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹುಬ್ಬಳ್ಳಿ ಉಣಕಲ್ ಕೆರೆ ಬಳಿ ಹೊಟೇಲ್‌ನಲ್ಲಿ ಬರ್ಬರವಾಗಿ ಹತ್ಯೆಯಾದ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಜು.೨ರಂದು ಈ ಹೊಟೇಲ್‌ಗೆ ಆಗಮಿಸಿದ್ದು, ನಾಳೆ ಹೊಟೇಲ್ ರೂಮ್ ಖಾಲಿ ಮಾಡುವವರಿದ್ದರು…
ಇಂದು ರಿಸೆಪ್ಶನ್‌ನಲ್ಲಿ ಗುರೂಜಿ ಬಂದು ಕುಳಿತುಕೊಳ್ಳುತ್ತಿದ್ದಂತೆಯೇ ಪಕ್ಕದಲ್ಲಿಯೇ ಅತಿ ವಿನಮ್ರತೆಯಿಂದ ನಿಂತಿದ್ದ ಇಬ್ಬರು ವ್ಯಕ್ತಿಗಳು ಮುಂದಿನ ಕೆಲವೇ ಕ್ಷಣಗಳಲ್ಲಿ ತನಗೆ ಯಮದೂತರಾಗಲಿದ್ದಾರೆ ಎಂಬ ಎಳ್ಳಷ್ಟೂ ಅನುಮಾನ ಹೊಂದಿರದೆ ಅವರೊಂದಿಗೆ ಮುಗುಳ್ನಕ್ಕಿದ್ದರು. ಮುಂದಿನ ಕ್ಷಣದಲ್ಲಿಯೇ ಆ ಇಬ್ಬರ ಪೈಕಿ ಓರ್ವ ಗುರೂಜಿಯ ಪಾದಕ್ಕೆ ನಮಸ್ಕರಿಸುವ ನಾಟಕವಾಡಿದ್ದು, ಆತನನ್ನು ಎಬ್ಬಿಸಲು ಗುರೂಜಿ ಬಗ್ಗುತ್ತಿದ್ದಂತೆಯೇ ಪಕ್ಕದಲ್ಲಿದ್ದ ಇನ್ನೋರ್ವ ಅವರ ಮೇಲೆ ದಾಳಿ ಆರಂಭಿಸಿದ್ದಾನೆ. ಅದಾಗಿ ಮುಂದಿನ ಕೆಲವೇ ಕ್ಷಣಗಳಲ್ಲಿ ಭೀಬತ್ಸ್ಯ ಘಟನೆಯೊಂದು ನಡೆದುಹೋಗಿದೆ.
ಈ ಎಲ್ಲಾ ಘಟನಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಓರ್ವನನ್ನು ಪೊಲೀಸರು ವಶಕ್ಕೂ ಪಡೆದಿದ್ದಾರೆ. ತನಿಖೆ ಮತ್ತಷ್ಟು ಚುರುಕುಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!