ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಸಿಗಾಲದಲ್ಲಿ ದೇಹಕ್ಕೆ ತಂಪು ಹಾಗೂ ನೀರಿನಾಂಶ ಹೆಚ್ಚಿಸುವ ಹಣ್ಣು ಸೇವಿಸಿದು ತುಂಬಾ ಮುಖ್ಯ. ಅದರಲ್ಲೂ ಹೆಚ್ಚಿನ ವಿಟಮಿನ್ ಹೊಂದಿರುವ ಕಲ್ಲಂಗಡಿ ಬೇಸಿಗೆಗೆ ಅತ್ಯುತ್ತಮ ಆಯ್ಕೆಯಾಗಿದೆ. ಕಲ್ಲಂಗಡಿ ಸೇವಿಸುವುದರಿಂದ ಎಷ್ಟೆಲ್ಲಾ ಲಾಭ ಇದೆ ಗೊತ್ತಾ?
- ದೇಹದಲ್ಲಿನ ನೀರಿನ ಕೊರತೆ ನೀಗಿಸುತ್ತದೆ.
- ದೇಹಕ್ಕೆ ಕಡಿಮೆ ಕ್ಯಾಲೊರಿ ಕೊಡಲಿದೆ.
- ಚರ್ಮಕ್ಕೆ ಕಾಂತಿ ಹೆಚ್ಚಾಗಿಸುತ್ತದೆ.
- ರಕ್ತದೊತ್ತಡ ನಿವಾರಿಸುತ್ತದೆ.
- ವಿಟಮಿನ್ ಬಿ, ಸಿ,ಡಿ ಅಂಶ ಹೆಚ್ಚಾಗಿದೆ.
- ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಿ, ತೂಕ ಇಳಿಸೋಕೆ ಸಹಾಯ ಮಾಡಲಿದೆ.
- ಮಲಬದ್ಧತೆ ಹಾಗೂ ಅಜೀರ್ಣ-ಗ್ಯಾಸ್ ಸಮಸ್ಯೆಗೆ ಪರಿಹಾರ.
- ಸ್ನಾಯು ನೋವು, ಸ್ನಾಯು ಸೆಳೆತ ಕಡಿಮೆ ಮಾಡುತ್ತದೆ.
ಈ ಟೇಸ್ಟಿ ಕಲ್ಲಂಗಡಿಯಿಂದ ಜ್ಯೂಸ್ ಮಾಡೋದು ಹೇಗೆ?
ಕಲ್ಲಂಗಡಿಯನ್ನು ಮಿಕ್ಸಿಯಲ್ಲಿ ಸಕ್ಕರೆಯೊಂದಿಗೆ ರುಬ್ಬಿಕೊಂಡು ಅದರ ಮೇಲೆ ಕಾಳು ಮೆಣಸಿನ ಪುಡಿ ಉದುರಿಸಿದರೆ ಬೇಸಿಗೆಗೆ ಸೂಕ್ತ ಜ್ಯೂಸ್ ಸಿದ್ಧವಾಗಲಿದೆ.