ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಒಂದು ಜಿಲ್ಲೆಯೂ ಕೂಡ ಈ ಬಿಸಿಲ ಧಗೆಗೆ ಹೊರತಾಗಿಲ್ಲ. ಎಲ್ಲ ಜಿಲ್ಲೆಗಳಲ್ಲಿಯೂ ಅತಿಯಾದ ಬಿಸಿಲಿದ್ದು, ಇನ್ನು ಒಂದು ವಾರ ಇದೇ ಪರಿಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಈಗಾಗಲೇ ಜನಕ್ಕೆ ಬೆಳಗ್ಗೆ ಏಳು ಗಂಟೆಗೆ ಚುರುಕು ಮುಟ್ಟುತ್ತಿದೆ. ಇನ್ನು ರಣಬೇಸಿಗೆಯನ್ನು ಕಳೆಯುವ ತನಕ ಜನರು ಆದಷ್ಟು ಮನೆಯಲ್ಲಿರುವುದು ಉತ್ತಮವಾಗಿದೆ.
ವೃದ್ಧರು ಹಾಗೂ ಮಕ್ಕಳು ಬೆಳಗ್ಗೆಯಿಂದ ಸಂಜೆಯವರೆಗೆ ಮನೆಯಲ್ಲಿರುವುದು ಸೂಕ್ತ. ಹಾಗೆಯೇ ನೀರು, ಎಳನೀರು, ಹಣ್ಣುಗಳನ್ನು ತಿನ್ನುವುದು ಉತ್ತಮವಾಗಿದೆ.



