ಹೊಸದಿಗಂತ ವರದಿ,ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಜಿಲ್ಲೆಯ ಜೀವನದಿ ನೇತ್ರಾವತಿ ಮತ್ತೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಇಂದು ಮುಂಜಾನೆ ಮಳೆಯ ಪ್ರಮಾಣ ಕಡಿಮೆಯಾದ ಸಮಯದಲ್ಲಿ ನೇತ್ರಾವತಿ- ಕುಮಾರಧಾರಾ ನದಿಗಳು ಅಪಾಯದ ಮಟ್ಟಕ್ಕಿಂತ 4 ಮೀಟರ್ ಕೆಳಗೆ ಹರಿಯತೊಡಗಿತ್ತು.
ಆದ್ರೆ ಸಾಯಂಕಾಲದಿಂದ ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಸುರಿಯಲಾರಂಭಿಸಿ ನದಿಯ ನೀರಿನ ಮಟ್ಟದಲ್ಲೂ ಹೆಚ್ಚಳ ಕಂಡು ಬಂದಿತ್ತು. 27.7 ಮೀಟರ್ ನಲ್ಲಿದ್ದ ನೀರಿನ ಮಟ್ಟವು ರಾತ್ರಿಯಾಗುತ್ತಿದ್ದಂತೆಯೇ 28.01 ಕ್ಕೆ ಬಂದು ನಿಂತಿತ್ತು. ತನ್ಮೂಲಕ ನೆರೆಯ ಭೀತಿಯನ್ನು ಮತ್ತೆ ಜೀವಂತವಿರಿಸಿದೆ.