ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಜಾಬ್ ವಿಷಯದಲ್ಲಿ ಯಾರು ಶಾಂತಿ ಕದಡುವುದು, ಲಾ ಅಂಡ್ ಆರ್ಡರ್ ಕೈಗೆತ್ತಿಕೊಳ್ಳುವುದು ಬೇಡ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮನವಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 5000 ಕಾಲೇಜುಗಳಲ್ಲಿ ಈ ವಿವಾದ ಕೇವಲ 12 ಕಾಲೇಜುಗಳಲ್ಲಿ ಮಾತ್ರ ನಡೆಯುತ್ತಿದ್ದು, ಈ ವಿವಾದವನ್ನು ತಣಿಸಲು ಸರ್ಕಾರ ಎಲ್ಲ ರೀತಿಯ ಕ್ರಮ ತೆಗೆದುಕೊಂಡಿದೆ ಎಂದರು.
ಆಯಾ ಆಯಾ ಜಿಲ್ಲೆಗಳಲ್ಲಿ ಗಲಭೆ ನಡೆದರೆ ಆಯಾ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗೆ ರಜೆ ಘೋಷಿಸುವ ಅಧಿಕಾರ ನೀಡಲಾಗಿದೆ ಎಂದು ತಿಳಿಸಿದರು.ಎರಡು ಮೂರು ದಿನಗಳ ಕಾಲ ರಜೆ ಕೊಡಲೂ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.