ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತವನ್ನು ಹಿಂದು ರಾಷ್ಟ್ರ ಮಾಡಲು ಸಾಧ್ಯವಿಲ್ಲ, ಅದು ಕನಸು. ಪ್ರಧಾನಿ ಮೋದಿ ಏನು ದೇವರ ಅವತಾರವಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ.
ಬಿಜೆಪಿಗರು ಪದೇ ಪದೇ ವಿಕಸಿತ ಭಾರತ ಎಂದು ಹೇಳುತ್ತಾರೆ. ವಿಕಸಿತ ಭಾರತ ಅವರ ನೈಜ ವಿಚಾರ ಅಲ್ಲ. ವಿಕಸಿತ ಭಾರತ ಆಗೋದು ಅವರಿಗೆ ಬೇಕಾಗಿಲ್ಲ. ಅವರಿಗೆ ಬೇಕಾಗಿರುವ ಹಿಡನ್ ಅಜೆಂಡಾ, ದೇಶವನ್ನು ಹಿಂದೂ ರಾಷ್ಟ್ರ ಮಾಡುವುದು. ಈ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಆಗಲ್ಲ, ಈ ದೇಶ ಬಹುತ್ವ ರಾಷ್ಟ್ರ, ಎಲ್ಲಾ ವರ್ಗದ ಜನ ಇಲ್ಲಿದ್ದಾರೆ. ಸಂವಿಧಾನದ ಅನುಸಾರ ಎಲ್ಲರಿಗೂ ಸಮಾನತೆ ಸಿಗಬೇಕು ಎಂದು ಅವರು ಬಿಜೆಪಿ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ.